Select Your Language

Notifications

webdunia
webdunia
webdunia
webdunia

ಶೂಟಿಂಗ್ ಗಾಗಿ ಕಾಡಿಗೆ ತೆರಳಿ ಸಂಕಷ್ಟಕ್ಕೀಡಾದ ನಟ ಅಲ್ಲು ಅರ್ಜುನ್

ಶೂಟಿಂಗ್ ಗಾಗಿ ಕಾಡಿಗೆ ತೆರಳಿ ಸಂಕಷ್ಟಕ್ಕೀಡಾದ ನಟ ಅಲ್ಲು ಅರ್ಜುನ್
ಹೈದರಾಬಾದ್ , ಶುಕ್ರವಾರ, 18 ಸೆಪ್ಟಂಬರ್ 2020 (10:37 IST)
ಹೈದರಾಬಾದ್ : ಸಿನಿಮಾ ಶೂಟಿಂಗ್ ಗಾಗಿ ಕಾಡಿಗೆ ತೆರಳಿದ್ದ ನಟ ಅಲ್ಲುಅರ್ಜುನ್ ವಿರುದ್ಧ ದೂರು ದಾಖಲಾಗಿದೆ ಎಂಬುದಾಗಿ ತಿಳಿದಬಂದಿದೆ.

ಇತ್ತೀಚೆಗಷ್ಟೇ ನಟ ಅಲ್ಲುಅರ್ಜುನ್ ಅವರು ತಮ್ಮ ಅಭಿನಯದ  “ಪುಷ್ಪ” ಸಿನಿಮಾ ಶೂಟಿಂಗ್ ಗಾಗಿ ಸ್ಥಳ ನೋಡಲು ಕಾಡಿಗೆ ತೆರಳಿದ್ದರು. ಅಲ್ಲಿ ಅವರನ್ನು ಕಂಡ ಅಭಿಮಾನಿಗಳು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಟ ನನ್ನು ನೋಡಲು ಮುಗಿಬಿದ್ದು, ಫೋಟೊ ತೆಗೆಸಿಕೊಂಡಿದ್ದಾರೆ. ಈ ಫೋಟೊ ವೈರಲ್ ಆಗಿದೆ.

ಅಲ್ಲದೇ ಕೊರೊನಾ ಹಿನ್ನಲೆಯಲ್ಲಿ ಅಲ್ಲಿದ್ದ ಸ್ಥಳಗಳನ್ನು ಪ್ರವೇಶ ನಿಷೇಧ ಮಾಡಿದರೂ ಒಳಗೆ ಪ್ರವೇಶಿಸಿದ್ದಾರೆ. ಆದಕಾರಣ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಅಲ್ಲುಅರ್ಜುನ್ ವಿರುದ್ಧ  ಅಡಿಲಾಬಾದ್ ನ ನೆರಾಡಿಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾ ಸಸ್ಯಾಹಾರಿಯಾಗಲು ಇವರೇ ಕಾರಣವಂತೆ!