Select Your Language

Notifications

webdunia
webdunia
webdunia
webdunia

ಸುದೀಪ್ ವಿಕ್ರಾಂತ್ ರೋಣಗೆ ಬೆದರಿತಾ ಅಜಯ್ ದೇವಗನ್ ಸಿನಿಮಾ? ರಿಲೀಸ್ ಮುಂದೂಡಿಕೆ

ಸುದೀಪ್ ವಿಕ್ರಾಂತ್ ರೋಣಗೆ ಬೆದರಿತಾ ಅಜಯ್ ದೇವಗನ್ ಸಿನಿಮಾ? ರಿಲೀಸ್ ಮುಂದೂಡಿಕೆ
ಮುಂಬೈ , ಶುಕ್ರವಾರ, 27 ಮೇ 2022 (16:08 IST)
ಮುಂಬೈ: ಇತ್ತೀಚೆಗೆ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಹಿಂದಿ ರಾಷ್ಟ್ರ ಭಾಷೆ ಎಂಬ ಕುರಿತಾಗಿ ಟ್ವೀಟ್ ಸಮರ ನಡೆದಿತ್ತು. ಇದೀಗ ಅಜಯ್ ದೇವಗನ್ ಥ್ಯಾಂಕ್ ಗಾಡ್ ಮತ್ತು ಸುದೀಪ್ ವಿಕ್ರಾಂತ್ ರೋಣ ಒಂದೇ ಸಮಯಕ್ಕೆ ರಿಲೀಸ್ ಆಗುವುದರಲ್ಲಿತ್ತು.

ವಿಕ್ರಾಂತ್ ರೋಣ ಜುಲೈ 28 ರಂದು ಮತ್ತು ಥ್ಯಾಂಕ್ ಗಾಡ್ ಸಿನಿಮಾ ಜುಲೈ 29 ರಂದು ಬಿಡುಗಡೆಯಾಗಬೇಕಿತ್ತು. ಆದರೆ ವಿಕ್ರಾಂತ್ ರೋಣ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಡೇಟ್ ಕ್ಲ್ಯಾಶ್ ಆಗುತ್ತದೆ ಎಂಬ ಕಾರಣಕ್ಕೆ ಅಜಯ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಇತ್ತೀಚೆಗೆ ಬಾಲಿವುಡ್ ಮಂದಿ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಭಯಪಡುವಂತಾಗಿದೆ. ಇತ್ತೀಚೆಗೆ ಕೆಜಿಎಫ್ 2 ಹಿಂದಿಯಲ್ಲಿ ಇತರ ಸಿನಿಮಾಗಳನ್ನು ಮಕಾಡೆ ಮಲಗಿಸಿದ್ದು ಇದಕ್ಕೆ ಸಾಕ್ಷಿ. ಇದೇ ಕಾರಣಕ್ಕೆ ಅಜಯ್ ಸಿನಿಮಾವನ್ನೂ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಕೇಸ್ ನಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ನೀಡಿದ ಕೋರ್ಟ್