Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್-ದರ್ಶನ್ ಅಭಿಮಾನಿಗಳ ನಡುವೆ ಕಿಚ್ಚು ಹತ್ತಿಸಿದ ನಟ ಆದಿತ್ಯ ಸಿನಿಮಾ

ಕಿಚ್ಚ ಸುದೀಪ್-ದರ್ಶನ್ ಅಭಿಮಾನಿಗಳ ನಡುವೆ ಕಿಚ್ಚು ಹತ್ತಿಸಿದ ನಟ ಆದಿತ್ಯ ಸಿನಿಮಾ
ಬೆಂಗಳೂರು , ಶುಕ್ರವಾರ, 31 ಜನವರಿ 2020 (10:04 IST)
ಬೆಂಗಳೂರು: ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ನಾಯಕರಾಗಿ ನಟಿಸಿರುವ ಮುಂದುವರಿದ ಅಧ್ಯಾಯ ಸಿನಿಮಾ ಈಗ ಮತ್ತೆ ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.

 

ಈ ಎರಡೂ ಸ್ಟಾರ್ ನಟರು ಮುನಿಸಿಕೊಂಡು ದೂರವಾದ ಬಳಿಕ ಅಭಿಮಾನಿಗಳ ನಡುವೆ ವಾರ್ ನಡೆಯುತ್ತಲೇ ಇರುತ್ತವೆ. ಇದೀಗ ಆದಿತ್ಯ ನಟನೆಯ ಸಿನಿಮಾ ಟ್ರೈಲರ್ ಲಾಂಚ್ ವೇಳೆ ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕರ ಕುರಿತಾಗಿ ಒಂದು ವಿಡಿಯೋ ಪ್ರಸಾರ ಮಾಡಲಾಯಿತು.

ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಮಾತ್ರ ಇರಲಿಲ್ಲ. ಇದರ ಬಗ್ಗೆ ಪತ್ರಕರ್ತರು ಕೇಳಿದಾಗ ಆದಿತ್ಯ ನೋ ಕಾಮೆಂಟ್ಸ್. ಈ ವಿಡಿಯೋ ಕ್ರಿಯೇಟ್ ಮಾಡಿದವರನ್ನೇ ಕೇಳಿ ಎಂದಿದ್ದಾರೆ. ಅಸಲಿಗೆ ಆದಿತ್ಯ ಮತ್ತು ದರ್ಶನ್ ಆತ್ಮೀಯ ಸ್ನೇಹಿತರು. ಟ್ರೈಲರ್ ಲಾಂಚ್ ಗೆ ದರ್ಶನ್ ಅತಿಥಿಯಾಗಿದ್ದರು. ಹೀಗಾಗಿ ಆದಿತ್ಯ ಸುದೀಪ್ ಬಗ್ಗೆ ಕೇಳಿದಾಗ ನೋ ಕಾಮೆಂಟ್ಸ್ ಎಂದಿದ್ದು ಕಿಚ್ಚನ ಅಭಿಮಾನಿಗಳನ್ನು ಕೆರಳಿಸಿದೆ. ಇದೀಗ ಇದೇ ವಿಚಾರವನ್ನಿಟ್ಟುಕೊಂಡು ಎರಡೂ ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ಆರಂಭಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಕುಮಾರಸ್ವಾಮಿ ಎಂಗೇಜ್ ಮೆಂಟ್ ಡೇಟ್ ಫಿಕ್ಸ್