Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಲಿರೋ ನಟಿ ಕಂಗನಾ ರಣಾವತ್

ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡಲಿರೋ ನಟಿ ಕಂಗನಾ ರಣಾವತ್
ಮುಂಬೈ , ಶನಿವಾರ, 12 ಸೆಪ್ಟಂಬರ್ 2020 (22:12 IST)
ಬಾಲಿವುಡ್ ನಟಿ ಕಂಗನಾ ರನೌತ್ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿಯನ್ನು ಭೇಟಿ ಮಾಡಲಿದ್ದಾರೆ.

ಮುಂಬೈನ ರಾಜ್ ಭವನದಲ್ಲಿ ರಾಜ್ಯಪಾಲರನ್ನು ನಟಿ ಕಂಗನಾ ಭೇಟಿಯಾಗಲಿದ್ದಾರೆ.

ಬಿಎಂಸಿ ತನ್ನ ಬಾಂದ್ರಾ ಕಚೇರಿಯನ್ನು ಉರುಳಿಸಿದೆ. ನಟಿ ತನ್ನ ಬಳಿ ಎಲ್ಲ ಅಗತ್ಯ ದಾಖಲೆಗಳು ಮತ್ತು ಅನುಮೋದನೆಗಳು ಇರುವುದಾಗಿ ಹೇಳಿಕೊಂಡಿದ್ದಾರೆ.

ನಟಿ ಕಚೇರಿ ಜಾಗದಲ್ಲಿದ್ದ ಕಟ್ಟಡವನ್ನು ಕೆಡವಿದ್ದರ ಬಗ್ಗೆ ಮಹಾರಾಷ್ಟ್ರ ರಾಜ್ಯಪಾಲರು “ಅಸಮಾಧಾನ ವ್ಯಕ್ತಪಡಿಸಿದ್ದಾರೆ”ಎನ್ನಲಾಗಿದೆ.  

"ನಾನು ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ" ಎಂದು ಕೋಶ್ಯಾರಿ ಹೇಳಿದ್ದಾರೆ ಎಂದು ಪಿಟಿಐ ವರದಿಗಳು ತಿಳಿಸಿವೆ.

ನಟಿ ಕಂಗನಾ ಮತ್ತು ಶಿವಸೇನೆ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದಾಗ ನಟಿ ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಕೇಸ್ : ಪ್ರಶಾಂತ್ ಸಂಬರಗಿ ಎಸೆದ ಬಾಲ್ ಗೆ ಶಾಸಕ ಜಮೀರ್, ನಟಿ ಸಂಜನಾ ಕಕ್ಕಾಬಿಕ್ಕಿ?