Select Your Language

Notifications

webdunia
webdunia
webdunia
webdunia

ಕನ್ನಡಿಗರನ್ನು ಹೊಗಳಿದ ಮಲಯಾಳಂ ನಟ ಪೃಥ್ವಿರಾಜ್

ಕನ್ನಡಿಗರನ್ನು ಹೊಗಳಿದ ಮಲಯಾಳಂ ನಟ ಪೃಥ್ವಿರಾಜ್
ಬೆಂಗಳೂರು , ಶನಿವಾರ, 25 ಜೂನ್ 2022 (17:04 IST)
ಬೆಂಗಳೂರು: ತಮ್ಮ ಮುಂಬರುವ ಸಿನಿಮಾ ಕಡುವ ಪ್ರಚಾರಾರ್ಥವಾಗಿ ಬೆಂಗಳೂರಿಗೆ ಬಂದಿರುವ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಕನ್ನಡಿಗರನ್ನು ಹೊಗಳಿದ್ದಾರೆ.

ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಕೆಜಿಎಫ್ 2, 777 ಚಾರ್ಲಿ ಸಿನಿಮಾವನ್ನು ಮಲಯಾಳಂನಲ್ಲಿ ಪ್ರೆಸೆಂಟ್ ಮಾಡಿದ್ದ ಪೃಥ್ವಿರಾಜ್ ಇಲ್ಲಿನ ಸಿನಿಮಾಗಳು ಜನಪ್ರಿಯವಾಗುತ್ತಿರುವ ರೀತಿ ನೋಡಿದರೆ ಈಗ ಸಿನಿಮಾ ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.

ಅಲ್ಲದೆ, ತಾವು ನಟಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಜನಗಣಮನ’ ಸಿನಿಮಾ ಬೆಂಗಳೂರಿನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದಿರುವುದರ ಬಗ್ಗೆಯೂ ಹೇಳಿಕೊಂಡಿರುವ ಪೃಥ್ವಿರಾಜ್ ಕನ್ನಡಿಗರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಬೆಂಗಳೂರು ಭೇಟಿ ವೇಳೆ ತಮ್ಮ ಚಿತ್ರ ‘ಕಡುವ’ಗೆ ಕನ್ನಡದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವೇಳೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ. ಹರೀಶ್ ಅವರನ್ನೂ ಭೇಟಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ಶಾರುಖ್ ಖಾನ್