Select Your Language

Notifications

webdunia
webdunia
webdunia
webdunia

ಮಗ ಮಾಡಿದ ತಪ್ಪು ಒಪ್ಪಿಕೊಂಡ ನಟ ಜಗ್ಗೇಶ್

ಮಗ ಮಾಡಿದ ತಪ್ಪು ಒಪ್ಪಿಕೊಂಡ ನಟ ಜಗ್ಗೇಶ್
ಬೆಂಗಳೂರು , ಗುರುವಾರ, 21 ಸೆಪ್ಟಂಬರ್ 2017 (08:42 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ದ್ವಿತೀಯ ಪುತ್ರ ಯತಿರಾಜ್ ಇತ್ತೀಚೆಗೆ ಮಡಿಕೇರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟಿದ ಘಟನೆ ನಡೆದಿತ್ತು. ಇದರ ಬಗ್ಗೆ ಜಗ್ಗೇಶ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.


ಜಗ್ಗೇಶ್ ಸದಾ ಟ್ವಿಟರ್ ನಲ್ಲಿ ಸಕ್ರಿಯ. ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನೂ ಬಿಡದೇ ಹೇಳುತ್ತಾರೆ. ಹಾಗಿರುವಾಗ ಮಗ  ತಪ್ಪು ಮಾಡಿ ಸಿಕ್ಕಿಬಿದ್ದಿರುವಾಗ  ಅದರ ಬಗ್ಗೆ ಮಾತನಾಡದೇ ಇರುತ್ತಾರೆಯೇ?

ಟ್ವಿಟರ್ ಪೇಜ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಜಗ್ಗೇಶ್ ‘ಅರಿವಿಲ್ಲದ ಊರಲ್ಲಿ ಅಚಾತುರ್ಯ.ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ.ತಪ್ಪಿಗೆ ದಂಡ. ಹೊಸ ಊರಲ್ಲಿ ದಾರಿ ಕಾಣದೆ ಏಕಮುಖ ರಸ್ತೆಯಲ್ಲಿ ಸಂಚರಿಸಿ ದಂಡ ಕಟ್ಟಿದ. ಸಂಚಾರ ನಿಯಮ ಪಾಲಿಸಿ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿಯನ್ನ ಕಾರಿನಿಂದ ಎಳೆದು ಲೈಂಗಿಕ ಕಿರುಕುಳ