Select Your Language

Notifications

webdunia
webdunia
webdunia
webdunia

ಬಳ್ಳಾರಿ ಬೇಡ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಚಿಕಿತ್ಸೆ ಬೇಕು: ಪತ್ನಿಗೆ ಬುಲಾವ್ ನೀಡಿದ ದರ್ಶನ್

Darshan

Krishnaveni K

ಬೆಂಗಳೂರು , ಬುಧವಾರ, 9 ಅಕ್ಟೋಬರ್ 2024 (12:24 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್  ಕೇಸ್ ನಲ್ಲಿ ಬಂಧಿತರಾಗಿರವ ನಟ ದರ್ಶನ್ ಈಗ ಬೆನ್ನು ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಯ ಬಗ್ಗೆ ಚರ್ಚಿಸಲು ಪತ್ನಿ ವಿಜಯಲಕ್ಷ್ಮಿಗೆ ಜೈಲಿಗೆ ಬರಲು ಸೂಚಿಸಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಅದು ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಇಂದೂ ಕೂಡಾ ಕೋರ್ಟ್ ನಲ್ಲಿ ಸರ್ಕಾರೀ ಅಭಿಯೋಜಕ ಪ್ರಸನ್ನಕುಮಾರ್ ವಾದ ಮುಂದುವರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಇಂದೂ ಅವರಿಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗಿದೆ.
 
ಆದರೆ ಈ ನಡುವೆ ಅವರ ಬೆನ್ನು ನೋವಿನ ಸಮಸ್ಯೆ ತೀವ್ರಗೊಂಡಿದ್ದು ಇಂದು ಬಳ್ಳಾರಿ ಜೈಲಿಗೆ ವೈದ್ಯಾಧಿಕಾರಿಗಳು ಬಂದು ದರ್ಶನ್ ರನ್ನು ಪರಿಶೀಲಿಸಲಿದ್ದಾರೆ. ದರ್ಶನ್ ಪರೀಕ್ಷಿಸಿ ಇಂದು ವೈದ್ಯರು ಯಾವ ವರದಿ ನೀಡುತ್ತಾರೋ ಅದನ್ನು ಆಧರಿಸಿ ಮುಂದಿನ ಕಾನೂನು ಹೋರಾಟ ನಡೆಸುವ ಬಗ್ಗೆ ದರ್ಶನ್ ಪತ್ನಿ ಜೊತೆ ಚರ್ಚಿಸಲಿದ್ದಾರೆ.

ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಪಟ್ಟು ಹಿಡಿದಿರುವ ದರ್ಶನ್ ನಾಳೆ ಪತ್ನಿ ಜೊತೆ ಈ ಬಗ್ಗೆ ಚರ್ಚಿಸಲಿದ್ದಾರೆ. ಜಾಮೀನು ಪಡೆಯಲು ಇದೇ ಆರೋಗ್ಯ ನೆಪ ನೀಡಲು ವಕೀಲರ ಜೊತೆ ಚರ್ಚಿಸಲು ಸೂಚನೆ ನೀಡುವ ಸಾಧ್ಯತೆಯಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ಗೆ ಸವಾಲಾಗಿರುವ ಎಸ್ ಪಿಪಿ ಪ್ರಸನ್ನಕುಮಾರ್