Select Your Language

Notifications

webdunia
webdunia
webdunia
webdunia

ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿರುವ ಅನಿರುದ್ಧ್ ಜತ್ಕಾರ್

ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿರುವ ಅನಿರುದ್ಧ್ ಜತ್ಕಾರ್
ಬೆಂಗಳೂರು , ಶುಕ್ರವಾರ, 21 ಜುಲೈ 2023 (16:27 IST)
Photo Courtesy: WD
ಬೆಂಗಳೂರು: ಕೆಲವು ದಿನಗಳ ಬ್ರೇಕ್ ನ ನಂತರ ನಟ ಅನಿರುದ್ಧ್ ಜತ್ಕಾರ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ನಿನ್ನೆ ಮೈಸೂರಿನ ಸಾಹಸಸಿಂಹ ವಿಷ್ಣುವರ್ಧನ್‍ ಸ್ಮಾರಕದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಈ ವೇಳೆ ಭಾರತಿ ವಿಷ್ಣುವರ್ಧನ್ ಕೂಡಾ ಹಾಜರಿದ್ದರು. ಜೊತೆ ಜೊತೆಯಲಿ ಧಾರವಾಹಿ ವಿವಾದದ ಬಳಿಕ ಅನಿರುದ್ಧ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದರು. ಈ ನಡುವೆ ಸೂರ್ಯವಂಶ ಎಂಬ ಧಾರವಾಹಿ ಸೆಟ್ಟೇರಿದರೂ ಬಳಿಕ ಅರ್ಧಕ್ಕೇ ನಿಂತಿದ್ದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇದೀಗ ಸಿನಿಮಾ ಮೂಲಕ ಭರ್ಜರಿಯಾಗಿ ಅನಿರುದ್ಧ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎನ್ನಬಹುದು.

ಅಂದ ಹಾಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ವಿಜಯ್ ರಾಘವೇಂದ್ರ ನಾಯಕರಾಗಿ ರಾಘು ಸಿನಿಮಾ ಮಾಡಿದ್ದ ಆನಂದ್ ರಾಜ್. ಚಿತ್ರದ ಕತೆ ಕೂಡಾ ಆನಂದ್ ಅವರದ್ದೇ. ಈಗ ಅನಿರುದ್ಧ್ ನಾಯಕರಾಗಿ ಹೊಸ ಸಿನಿಮಾಗೆ ಸರ್ವೋತ್ತಮ್ ರಾಜು ಬಂಡವಾಳ ಹೂಡಲಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದಲ್ಲಿ ಅನಿರುದ್ಧ್ ಗೆ ಇಬ್ಬರು ನಾಯಕಿಯರು. ನಿಧಿ ಸುಬ್ಬಯ್ಯ ಮತ್ತು ರಾಚೆಲ್ ಡೇವಿಡ್ ಅಭಿನಯಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್ ಚರಣ್ ಮಗಳಿಗೆ ಜ್ಯೂ.ಎನ್ ಟಿಆರ್ ಕೊಟ್ಟ ಆ ದುಬಾರಿ ಉಡುಗೊರೆ ಏನು ಗೊತ್ತಾ?