Select Your Language

Notifications

webdunia
webdunia
webdunia
webdunia

ಪೊಲೀಸ್ ತನಿಖೆ ವೇಳೆ ಆರೋ‍ಪಿ ಪವಿತ್ರಾ ಗೌಡ ಕಣ್ಣೀರು

ಪೊಲೀಸ್ ತನಿಖೆ ವೇಳೆ ಆರೋ‍ಪಿ ಪವಿತ್ರಾ ಗೌಡ ಕಣ್ಣೀರು

Sampriya

ಬೆಂಗಳೂರು , ಶುಕ್ರವಾರ, 6 ಸೆಪ್ಟಂಬರ್ 2024 (17:19 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ  ಚಾರ್ಜ್‌ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಿದ್ದ ಹಾಗೇ ಒಂದೊಂದೆ ವಿಷಯಗಳು ಹೊರಬೀಳುತ್ತಿದೆ. ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾಗ ದರ್ಶನ್ ಆಪ್ತೆ ಪವಿತ್ರಾ ಗೌಡ ಕಣ್ಣೀರು ಹಾಕ್ತಿರುವ ಫೋಟೋ ರಿವೀಲ್ ಆಗಿದೆ.

ಪಟ್ಟಣಗೆರೆಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಡಿ ಗ್ಯಾಂಗ್ ನಡೆಸಿದ ಹಲ್ಲೆ ಹಾಗೂ ತನಿಖೆ ಸಂಬಂಧದ ಕೆಲ ಫೋಟೋಗಳು ರಿವೀಲ್ ಆಗಿತ್ತು. ಅದರಲ್ಲಿ ರೇಣುಕಾಸ್ವಾಮಿ ಪ್ರಾಣ ಭಿಕ್ಷೆ ಬೇಡುತ್ತಿರುವುದು ಹಾಗು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿರುವ ಫೋಟೋ ಹತ್ಯೆಯ ಕರಾಳತೆಯನ್ನು ಬಿಚ್ಚಿಡುತ್ತಿದೆ.  ಸ್ಟೋನಿ ಬ್ರೂಕ್‌ನಲ್ಲಿ ನಟ ದರ್ಶನ್ ಗ್ಯಾಂಗ್ ಮಾಡಿದ ಪಾರ್ಟಿಯನ್ನು ಮರುಸೃಷ್ಟಿ ಮಾಡಿ ಪೊಲೀಸರು ತನಿಖೆ ನಡೆಸಿದ ಫೋಟೋ ಕೂಡಾ ರಿವೀಲ್ ಆಗಿತ್ತು.

ಇದೀಗ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಎದುರಿಸುತ್ತಿರುವ ಫೋಟೋ ರಿವೀಲ್ ಆಗಿದೆ.  ಅದರಲ್ಲಿ ಸಪ್ಪೆ ಮುಖ ಮಾಡಿಕೊಂಡು, ಕಣ್ಣೀರು ಹಾಕುತ್ತಿರುವ ಹಾಗಿದೆ. ಎಪಿನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಎದುರಿಸುತ್ತಿರುವ ಫೋಟೋ ಇದಾಗಿದೆ.

ಇದೀಗ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಆಪ್ತೆ ಪವಿತ್ರಾ ಗೌಡ ಮೊಬೈಲ್ ಸೇರಿದಂತೆ ಹಲವರ ಮೊಬೈಲ್ ಫೋನ್ ರಿಟ್ರೀವ್ ಮಾಡಲಾಗಿದೆ. ಆರೋಪಿಗಳ ಮೊಬೈಲ್‌ನಲ್ಲಿ ರೇಣುಕಾಸ್ವಾಮಿಗೆ ಟಾರ್ಚರ್ ನೀಡಿದ ಫೋಟೋಗಳು ಸಿಕ್ಕಿದೆ ಎನ್ನಲಾಗಿದೆ.

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಫೈನಲ್ ಹಂತಕ್ಕೆ ತಲುಪಿ, ಇದೀಗ ಚಾರ್ಜ್‌ಶೀಟ್‌ ಅನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ದರ್ಶನ್ ಅವರು ಪ್ರಕರಣ ಸಂಬಂಧ ಜೈಲು ಸೇರಿ 3 ತಿಂಗಳು ಆಗ್ತಾ ಬಂದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ನಾಗಶೇಖರ್ ಕಾರು ಅಪಘಾತ, ಮಹಿಳೆಗೆ ಗಾಯ