Select Your Language

Notifications

webdunia
webdunia
webdunia
webdunia

ಎಷ್ಟು ದಿನ ಆಗಿತ್ತು ಗುರು ಈ ಗಜ ಗಾಂಭೀರ್ಯ ನಡಿಗೆ ನೋಡಿ

ಎಷ್ಟು ದಿನ ಆಗಿತ್ತು ಗುರು ಈ ಗಜ ಗಾಂಭೀರ್ಯ ನಡಿಗೆ ನೋಡಿ

Sampriya

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (19:34 IST)
ಬೆಂಗಳೂರು: ಅತ್ತ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದ ಹಾಗೇ ನಟ ದರ್ಶನ್ ಅವರ ಜತೆ ಮುಂದಿನ ಕಾನೂನು ಹೋರಾಟದ ಬಗ್ಗೆ ಮಾತನಾಡಲು ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ.

ಭಾಮೈದ ದಿನಕರ್ ತೂಗುದೀಪ್ ಜತೆ ವಿಜಯಲಕ್ಷ್ಮೀ ಅವರು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಪತ್ರಗಳು ಭಾರೀ ಕುತೂಹಲ ಮೂಡಿಸಿದ್ದು, ಅದು ಜಾಮೀನು ಸಂಬಂಧಿಸಿದ್ದು ಎನ್ನಲಾಗಿದೆ. ‌ಪತ್ನಿ ಹಾಗೂ ಸಹೋದರನನ್ನು ಭೇಟಿಯಾಗಲು ದರ್ಶನ್ ಸೆಲ್‌ನಿಂದ ಹೊರ ಬರುತ್ತಿರುವ ದೃಶ್ಯವನ್ನು ಅವರ ಫ್ಯಾನ್ಸ್‌ ನೋಡಿ ಖುಷಿ ಪಟ್ಟಿದ್ದಾರೆ. ಆ ವಿಡಿಯೋ ವನ್ನು ಶೇರ್ ಮಾಡಿ, ಎಷ್ಟು ದಿವಸ ಆಗಿತ್ತು, ಈ ಗಜ ಗಾಂಭೀರ್ಯ ನಡಿಗೆ ನೋಡಿ ಎಂದಿದ್ದಾರೆ

ಎಷ್ಟು ದಿನ ಆಗಿತ್ತು ಗುರು ಈ ಗಜ ಗಾಂಭೀರ್ಯ ನಡಿಗೆ ನೋಡಿ, ಚಲನಚಿತ್ರಗಳನ್ನು ಬಿಡಿ, ಕೆಲವು ನಟರು ಅವರ ಆಫ್‌ಲೈನ್ ವಾಕಿಂಗ್ ಸ್ಟೈಲ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ತಮ್ಮ ನೆಚ್ಚಿನ ನಟನನ್ನು ಕೊಂಡಾಡಿದ್ದಾರೆ. ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಪತ್ನಿ ವಿಜಯಲಕ್ಷ್ಮೀ ಎರಡು ಭಾರೀ ಭೇಟಿಗೆ ಬಂದಿದ್ದಾರೆ. ಈ  ವೇಳೆ ದರ್ಶನ್ ಅವರು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.

ದರ್ಶನ್ ಅವರು ಈ ಪ್ರಕರಣದಿಂದ ಆದಷ್ಟು ಬೇಗ ಹೊರಬರಲಿ ಎಂದು ಅವರ ಫ್ಯಾನ್ಸ್ ದೇವರ ಹತ್ರ ಬೇಡಿಕೊಳ್ಳುತ್ತಿದ್ದಾರೆ. ನಮ್ಮ ದಾಸ ತಪ್ಪೇ ಮಾಡಿಲ್ಲ, ಆದಷ್ಟು ಬೇಗ ಇದರಿಂದ ಹೊರಬರುತ್ತಾರೆ ಎಂದು ಹೇಳುತ್ತಿದ್ದಾರೆ. ಇ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಥಳ ಮಹಜರು ವೇಳೆ ದರ್ಶನ್ ಸಪ್ಪೆ ಮುಖ, ಗಾಬರಿಯಲ್ಲೇ ಕುಳಿತಿದ್ದ ಚಿಕ್ಕಣ್ಣ