Webdunia - Bharat's app for daily news and videos

Install App

ಮತ್ತೆ ಒಂದಾದ ನಿಖಿಲ್ ಕುಮಾರಸ್ವಾಮಿ, ಅಭಿಷೇಕ್ ಅಂಬರೀಶ್

Webdunia
ಶುಕ್ರವಾರ, 31 ಮೇ 2019 (09:31 IST)
ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಎದುರಾಳಿಗಳಾಗಿದ್ದರಿಂದ ಎರಡೂ ಕುಟುಂಬದವರ ನಡುವೆ ಮಾತಿನ ಸಮರ ಜೋರಾಗಿಯೇ ನಡೆದಿತ್ತು.


ಈಗ ಚುನಾವಣೆ ಮುಗಿದು ಸುಮಲತಾ ಗೆದ್ದೂ ಆಗಿದೆ. ಹೀಗಾಗಿ ರಾಜಕೀಯ ವೈಷಮ್ಯಗಳನ್ನೆಲ್ಲಾ ಮರೆತು ಅಭಿ ಮತ್ತು ನಿಖಿಲ್ ಮತ್ತೆ ಸ್ನೇಹ ಹಸ್ತ ಚಾಚಿದ್ದಾರೆ. ಅಂಬರೀಶ್ ಜನ್ಮ ದಿನದಂದು ಶುಭ ಹಾರೈಸಿದ ನಿಖಿಲ್, ಮೊದಲ ಸಿನಿಮಾ ಬಿಡುಗಡೆಯ ಖುಷಿಯಲ್ಲಿರುವ ಅಭಿಷೇಕ್ ಗೆ ವಿ‍ಶ್‍ ‍ಮಾಡಿದ್ದರು.

ನಿಖಿಲ್ ಹಾರೈಕೆಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಭಿ ‘ನಿನ್ನ ಹಾರೈಕೆಯಿಂದ ಖುಷಿಯಾಗಿದೆ. ಮೊದಲ ಸಿನಿಮಾ ಬಿಡುಗಡೆಯಾಗುವಾಗ ಏನು ಆತಂಕವಿರುತ್ತದೆ ಎಂಬ ಅನುಭವ ನಿನಗೂ ಇರುತ್ತದೆ. ನಾವೆಲ್ಲರೂ ಜತೆಯಾಗಿ ಬೆಳೆದು ಕನ್ನಡ ಚಿತ್ರರಂಗ ಒಗ್ಗಟ್ಟಾಗಿದೆ ಎಂದು ಸಾರೋಣ. ರಾಜಕೀಯವಾಗಿ ಏನೇ ಫಲಿತಾಂಶ ಬಂದಿರಬಹುದು. ಆದರೆ ಮಂಡ್ಯ ಜನರ ಒಳಿತಿಗಾಗಿ ಜತೆಯಾಗಿ ಕೆಲಸ ಮಾಡೋಣ’ ಎಂದು ಅಭಿ ಸ್ನೇಹ ಪ್ರಕಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments