Webdunia - Bharat's app for daily news and videos

Install App

ಅಯೋಧ್ಯೆ ರಾಮಮಂದಿರಕ್ಕೆ ಭರ್ಜರಿ ದೇಣಿಗೆ ನೀಡಿದ ಅಂಬಾನಿ ಕುಟುಂಬ

Krishnaveni K
ಗುರುವಾರ, 25 ಜನವರಿ 2024 (09:07 IST)
ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಎಷ್ಟೋ ಜನ ದಾನಿಗಳು ದೇಣಿಗೆ ನೀಡಿದ್ದಾರೆ. ಆ ಪೈಕಿ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬವೂ ಒಂದು.

ಜನವರಿ 22 ರಂದು ನಡೆದಿದ್ದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ, ಮಕ್ಕಳು, ಸೊಸೆ, ಅಳಿಯನ ಜೊತೆ ಹಾಜರಾಗಿದ್ದರು. ಇಡೀ ಕುಟುಂಬ ರಾಮಮಂದಿರದ ಮುಂದೆ ನಿಂತು ಫೋಟೋಗೆ ಪೋಸ್ ನೀಡಿದ್ದು ಎಲ್ಲೆಡೆ ವೈರಲ್ ಆಗಿತ್ತು.

ಎಲ್ಲರಿಗೂ ತಿಳಿದಿರುವ ಹಾಗೆ ಅಂಬಾನಿ ಕುಟುಂಬದಲ್ಲಿ ಎಲ್ಲರೂ ದೈವ ಭಕ್ತರು. ಯಾವುದೇ ಹಬ್ಬ-ಹರಿದಿನಗಳನ್ನು ಅಂಬಾನಿ ಕುಟುಂಬ ಭರ್ಜರಿಯಾಗಿ ಆಚರಿಸುತ್ತಾರೆ. ದಾನ ನೀಡುವ ವಿಚಾರದಲ್ಲೂ ಅವರು ಸದಾ ಮುಂದೆ. ಅದು ರಾಮಮಂದಿರ ವಿಚಾರದಲ್ಲೂ ನಡೆದಿದೆ.

ರಾಮಮಂದಿರಕ್ಕೆ ಅಂಬಾನಿ ಕೊಟ್ಟಿದ್ದೆಷ್ಟು?
ರಾಮ ಜನ್ಮಭೂಮಿ ಟ್ರಸ್ಟ್ ಗೆ ಅಂಬಾನಿ ಕುಟುಂಬ ಬರೋಬ್ಬರಿ 2.5 ಕೋಟಿ ರೂ. ದೇಣಿಗೆ ನೀಡಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ರಾಮಲಲ್ಲಾನಿಗೆ 33 ಕೆ.ಜಿ. ತೂಕದ ಚಿನ್ನಾಭರಣ, ಮೂರು ಚಿನ್ನದ ಕಿರೀಟಗಳನ್ನು ದಾನ ಮಾಡಿದೆ ಎಂದು ಆಂಗ್ಲ ವಾಹಿನಿಗಳು ವರದಿ ಮಾಡಿದೆ. ಸಾವಿರಾರು ಕೋಟಿ ಒಡೆಯರಿಗೆ ಈ ಮೊತ್ತ ದೊಡ್ಡದೇನಲ್ಲ.

ಆದರೆ ಅಂಬಾನಿ ಕುಟುಂಬ ಈ ರೀತಿ ದಾನ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೆ ಮೊದಲು ಕೇದಾರನಾಥ ದೇವಾಲಯಕ್ಕೆ 5 ಕೋಟಿ ರೂ. ಕೇರಳದ ಗುರುವಾಯೂರು ದೇವಾಲಯಕ್ಕೆ 1.5 ಕೋಟಿ ರೂ., ತಿರುಪತಿ ದೇವಾಲಯಕ್ಕೆ 1.5 ಕೋಟಿ ರೂ. ದೇಣಿಗೆ ನೀಡಿದ್ದರು. ಇದೀಗ ರಾಮಮಂದಿರಕ್ಕೂ ಭಾರೀ ಮೊತ್ತದ ದೇಣಿಗೆ ನೀಡಿ ಸುದ್ದಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments