Webdunia - Bharat's app for daily news and videos

Install App

ಅಯೋಧ್ಯೆ ರಾಮಮಂದಿರಕ್ಕೆ ಭರ್ಜರಿ ದೇಣಿಗೆ ನೀಡಿದ ಅಂಬಾನಿ ಕುಟುಂಬ

Krishnaveni K
ಗುರುವಾರ, 25 ಜನವರಿ 2024 (09:07 IST)
ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಎಷ್ಟೋ ಜನ ದಾನಿಗಳು ದೇಣಿಗೆ ನೀಡಿದ್ದಾರೆ. ಆ ಪೈಕಿ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬವೂ ಒಂದು.

ಜನವರಿ 22 ರಂದು ನಡೆದಿದ್ದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ, ಮಕ್ಕಳು, ಸೊಸೆ, ಅಳಿಯನ ಜೊತೆ ಹಾಜರಾಗಿದ್ದರು. ಇಡೀ ಕುಟುಂಬ ರಾಮಮಂದಿರದ ಮುಂದೆ ನಿಂತು ಫೋಟೋಗೆ ಪೋಸ್ ನೀಡಿದ್ದು ಎಲ್ಲೆಡೆ ವೈರಲ್ ಆಗಿತ್ತು.

ಎಲ್ಲರಿಗೂ ತಿಳಿದಿರುವ ಹಾಗೆ ಅಂಬಾನಿ ಕುಟುಂಬದಲ್ಲಿ ಎಲ್ಲರೂ ದೈವ ಭಕ್ತರು. ಯಾವುದೇ ಹಬ್ಬ-ಹರಿದಿನಗಳನ್ನು ಅಂಬಾನಿ ಕುಟುಂಬ ಭರ್ಜರಿಯಾಗಿ ಆಚರಿಸುತ್ತಾರೆ. ದಾನ ನೀಡುವ ವಿಚಾರದಲ್ಲೂ ಅವರು ಸದಾ ಮುಂದೆ. ಅದು ರಾಮಮಂದಿರ ವಿಚಾರದಲ್ಲೂ ನಡೆದಿದೆ.

ರಾಮಮಂದಿರಕ್ಕೆ ಅಂಬಾನಿ ಕೊಟ್ಟಿದ್ದೆಷ್ಟು?
ರಾಮ ಜನ್ಮಭೂಮಿ ಟ್ರಸ್ಟ್ ಗೆ ಅಂಬಾನಿ ಕುಟುಂಬ ಬರೋಬ್ಬರಿ 2.5 ಕೋಟಿ ರೂ. ದೇಣಿಗೆ ನೀಡಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ರಾಮಲಲ್ಲಾನಿಗೆ 33 ಕೆ.ಜಿ. ತೂಕದ ಚಿನ್ನಾಭರಣ, ಮೂರು ಚಿನ್ನದ ಕಿರೀಟಗಳನ್ನು ದಾನ ಮಾಡಿದೆ ಎಂದು ಆಂಗ್ಲ ವಾಹಿನಿಗಳು ವರದಿ ಮಾಡಿದೆ. ಸಾವಿರಾರು ಕೋಟಿ ಒಡೆಯರಿಗೆ ಈ ಮೊತ್ತ ದೊಡ್ಡದೇನಲ್ಲ.

ಆದರೆ ಅಂಬಾನಿ ಕುಟುಂಬ ಈ ರೀತಿ ದಾನ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೆ ಮೊದಲು ಕೇದಾರನಾಥ ದೇವಾಲಯಕ್ಕೆ 5 ಕೋಟಿ ರೂ. ಕೇರಳದ ಗುರುವಾಯೂರು ದೇವಾಲಯಕ್ಕೆ 1.5 ಕೋಟಿ ರೂ., ತಿರುಪತಿ ದೇವಾಲಯಕ್ಕೆ 1.5 ಕೋಟಿ ರೂ. ದೇಣಿಗೆ ನೀಡಿದ್ದರು. ಇದೀಗ ರಾಮಮಂದಿರಕ್ಕೂ ಭಾರೀ ಮೊತ್ತದ ದೇಣಿಗೆ ನೀಡಿ ಸುದ್ದಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಎಲ್ಲೆಲ್ಲಿ ಇಲ್ಲಿದೆ ವಿವರ

ಸುಂದರವಾಗಿದ್ದಳೆಂದು ತಲೆ ಬೋಳಿಸಿ, ವರದಕ್ಷಿಣೆ ಕಿರುಕುಳ: ಯುಎಇಯಲ್ಲಿ ಮಗುವಿನೊಂದಿಗೆ ಕೇರಳ ಮಹಿಳೆ ಆತ್ಮಹತ್ಯೆ

ಶುಭಾಂಶು ಶುಕ್ಲ ಬದಲು ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

ಬೆಂಗಳೂರು, ನೋಟ್ಸ್ ನೀಡು ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಬ್ಬರು, ಸ್ನೇಹಿತನಿಂದ ರೇಪ್‌

ಮಂತ್ರಾಲಯಕ್ಕೆ ಭೇಟಿ ನೀಡಿದ ಬಳಿಕ ಪೀಠಾಧಿಪತಿಯರನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ

ಮುಂದಿನ ಸುದ್ದಿ
Show comments