Select Your Language

Notifications

webdunia
webdunia
webdunia
webdunia

ಪ್ರತಿಭಟನಾಕಾರರಿಂದ ಕ್ರಿಕೆಟಿಗ ರವೀಂದ್ರ ಜಡೇಜಾ ಮೇಲೆ ಚಪ್ಪಲಿ ಎಸೆತ

ಪ್ರತಿಭಟನಾಕಾರರಿಂದ ಕ್ರಿಕೆಟಿಗ ರವೀಂದ್ರ ಜಡೇಜಾ ಮೇಲೆ ಚಪ್ಪಲಿ ಎಸೆತ
ಚೆನ್ನೈ , ಗುರುವಾರ, 12 ಏಪ್ರಿಲ್ 2018 (09:37 IST)
ಚೆನ್ನೈ: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊನ್ನೆ ನಡೆದ ಐಪಿಎಲ್ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರವೀಂದ್ರ ಜಡೇಜಾ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಕೆಕೆಆರ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 8 ನೇ ಓವರ್ ನಲ್ಲಿ ಬೌಂಡರಿ ಗೆರೆ ಬಳಿ ನಿಂತು ಫೀಲ್ಡಿಂಗ್ ಮಾಡುತ್ತಿದ್ದ ಜಡೇಜಾ ಮೇಲೆ ಕಾವೇರಿ ಪ್ರತಿಭಟನಾಕಾರರು ಚಪ್ಪಲಿ ಎಸೆದಿದ್ದಾರೆ. ಬಳಿಕ ದ.ಆಫ್ರಿಕಾ ಮೂಲದ ಆಟಗಾರರಾದ ಫಾ ಡು ಪ್ಲೆಸಿಸ್ ಮತ್ತು ಲುಂಗಿ ನಿಗಿಡಿ ಮೇಲೂ ಚಪ್ಪಲಿ ಎಸೆಯಲಾಗಿದೆ. ಅದೃಷ್ಟವಶಾತ್ ಇದು ಆಟಗಾರರ ಬಳಿ ಬಿದ್ದಿತ್ತಷ್ಟೆ.

ಇದೀಗ ಚೆನ್ನೈ ಅಭಿಮಾನಿಗಳು ಕ್ರಿಕೆಟಿಗರ ಮೇಲೆ ಈ ರೀತಿ ವರ್ತನೆ ತೋರಿದ ಪ್ರತಿಭಟನಾಕಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಆಟಗಾರರ ಬಳಿ ಕ್ಷಮೆ ಯಾಚಿಸಿದ್ದಾರೆ. ಮೊನ್ನೆಯ ಪಂದ್ಯ ಪ್ರತಿಭಟನೆಯಿಂದಾಗಿಯೇ ಸುದ್ದಿಯಾಗಿತ್ತು. ಈ ಘಟನೆಯಿಂದಾಗಿ ಇದೀಗ ಚೆನ್ನೈ ಮೈದಾನದಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳೇ ಸ್ಥಳಾಂತರವಾಗುವ ಸಂಭವವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಪ್ರತಿಭಟನೆಯಿಂದಾಗಿ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳೇ ಇಲ್ಲ?!