Select Your Language

Notifications

webdunia
webdunia
webdunia
webdunia

ಐಪಿಎಲ್ 14: ವಿರಾಟ್ ಕೊಹ್ಲಿಗಾಗಿ ಈ ಸಲ ಕಪ್ ಗೆಲ್ಲುತ್ತೇವೆ ಎಂದ ಎಸ್. ಭರತ್

ಐಪಿಎಲ್ 14: ವಿರಾಟ್ ಕೊಹ್ಲಿಗಾಗಿ ಈ ಸಲ ಕಪ್ ಗೆಲ್ಲುತ್ತೇವೆ ಎಂದ ಎಸ್. ಭರತ್
ದುಬೈ , ಭಾನುವಾರ, 10 ಅಕ್ಟೋಬರ್ 2021 (10:41 IST)
ದುಬೈ: ಐಪಿಎಲ್ 14 ರಲ್ಲಿ ಪ್ಲೇ ಆಫ್ ಹಂತಕ್ಕೇರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ.


ನಾಯಕರಾಗಿ ವಿರಾಟ್ ಕೊಹ್ಲಿಗೆ ಆರ್ ಸಿಬಿಯಲ್ಲಿ ಇದು ಕೊನೆಯ ಟೂರ್ನಿ. ಹೀಗಾಗಿ ಕಪ್ ಗೆದ್ದು ತಮ್ಮ ನಾಯಕನಿಗೆ ನೀಡುವುದು ಆರ್ ಸಿಬಿ ಹುಡುಗರ ಕನಸು.

ಈ ಬಾರಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಯುವ ಬ್ಯಾಟ್ಸ್ ಮನ್ ಶ್ರೀಕರ್ ಭರತ್ ಈ ಬಗ್ಗೆ ಮಾತನಾಡಿದ್ದು, ‘ಈ ಬಾರಿ ಕಪ್ ಗೆದ್ದು ವಿರಾಟ್ ಭಾಯ್ ಗೆ ನೀಡಿದರೆ ಅದು ಕೇಕ್ ಮೇಲೆ ಚೆರಿಯಂತೆ. ಅದಕ್ಕಿಂತ ಹೆಚ್ಚು ವಿರಾಟ್ ಜೊತೆ ಆಡುವುದೇ ಒಂದು ದೊಡ್ಡ ಹೆಮ್ಮೆ. ಅವರು ಯುವ ಆಟಗಾರರನ್ನು ತುಂಬಾ ಪ್ರೋತ್ಸಾಹಿಸುತ್ತಾರೆ. ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ. ಸ್ನೇಹಿತರಂತೆ ಇರುತ್ತಾರೆ. ಅವರ ಜೊತೆ ಇರುವುದೇ ನಮಗೆ ಆಶೀರ್ವಾದದಂತೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಪ್ಲೇ ಆಫ್ ಪಂದ್ಯದಲ್ಲೂ ರೈನಾ ಆಡುವುದು ಅನುಮಾನ