ದುಬೈ: ಐಪಿಎಲ್ 14 ರಲ್ಲಿ ಲೀಗ್ ನಲ್ಲೇ ತನ್ನ ಯಾತ್ರೆ ಮುಗಿಸಿದ ಬಳಿಕ ಕಿಂಗ್ಸ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಪೋಸ್ಟ್ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.
Photo Courtesy: Google
ತಂಡವನ್ನು ಮುನ್ನಡೆಸಿದ್ದು ನನಗೆ ಗೌರವ. ಇದುವರೆಗೆ ನನಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ರಾಹುಲ್ ಲೇಟೆಸ್ಟ್ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಅವರ ಈ ಪೋಸ್ಟ್ ನೋಡಿ ನೆಟ್ಟಿಗರು ಮುಂದಿನ ಬಾರಿ ಬೇರೆ ತಂಡಕ್ಕೆ ಆಡುತ್ತಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವರು ಮತ್ತೆ ಆರ್ ಸಿಬಿಗೆ ಬನ್ನಿ ಎಂದರೆ ಇನ್ನು ಕೆಲವರು ಪಂಜಾಬ್ ಬಿಟ್ಟುಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ಸದ್ಯಕ್ಕೆ ಆರ್ ಸಿಬಿಯಲ್ಲಿ ನಾಯಕನ ಸ್ಥಾನ ಖಾಲಿಯಿದೆ. ಮುಂದಿನ ಆವೃತ್ತಿ ವೇಳೆಗೆ ಮತ್ತೆ ರಾಹುಲ್ ಆರ್ ಸಿಬಿ ತಂಡಕ್ಕೆ ಸೇರ್ಪಡೆಯಾಗಿ ನಾಯಕರಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಈ ಪೋಸ್ಟ್ ಇದೆ.