Select Your Language

Notifications

webdunia
webdunia
webdunia
webdunia

ಐಪಿಎಲ್: ಆರ್ ಸಿಬಿ ಉಳಿಸಿಕೊಳ್ಳಬಹುದಾದ ನಾಲ್ವರು ಆಟಗಾರರು

ಐಪಿಎಲ್: ಆರ್ ಸಿಬಿ ಉಳಿಸಿಕೊಳ್ಳಬಹುದಾದ ನಾಲ್ವರು ಆಟಗಾರರು
ಬೆಂಗಳೂರು , ಮಂಗಳವಾರ, 2 ನವೆಂಬರ್ 2021 (12:07 IST)
ಬೆಂಗಳೂರು: ಮುಂದಿನ ಐಪಿಎಲ್ ಗೆ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಸೀಮಿತ ಆಟಗಾರರನ್ನೇ ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ ಆರ್ ಸಿಬಿ ಮುಂದಿನ ಆವೃತ್ತಿಗೆ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ನೋಡೋಣ.

ವಿರಾಟ್ ಕೊಹ್ಲಿ: ಮುಂದಿನ ಆವೃತ್ತಿಗೆ ಕೊಹ್ಲಿ ನಾಯಕರಲ್ಲದೇ ಹೋದರೂ ಆಟಗಾರನಾಗಿ ಅವರನ್ನು ಆರ್ ಸಿಬಿ ತಂಡ ಖಂಡಿತವಾಗಿಯೂ ಉಳಿಸಿಕೊಳ್ಳಲಿದೆ.

ಎಬಿಡಿ ವಿಲಿಯರ್ಸ್: ತಂಡದ ಹಿರಿಯ ಆಟಗಾರ, ಇಷ್ಟು ದಿನ ಕೊಹ್ಲಿಗೆ ಬಲಗೈ ಬಂಟನಂತಿದ್ದ ಎಬಿಡಿ ಸಿಡಿದರೆ ರನ್ ಹೊಳೆ ಗ್ಯಾರಂಟಿ. ಹೀಗಾಗಿ ಅವರನ್ನು ಆರ್ ಸಿಬಿ ಅಷ್ಟು ಸುಲಭಕ್ಕೆ ಬಿಟ್ಟುಕೊಡದು.

ದೇವದತ್ತ್ ಪಡಿಕ್ಕಲ್: ಆರ್ ಸಿಬಿಯ ಭವಿಷ್ಯದ ಸ್ಟಾರ್ ದೇವದತ್ತ್ ಪಡಿಕ್ಕಲ್. ಈಗಾಗಲೇ ತಂಡದ ಪರ ಸಾಕಷ್ಟು ರನ್ ಗಳಿಸಿರುವ ದೇವದತ್ತ್ ಪಡಿಕ್ಕಲ್ ರನ್ನು ಕಳೆದುಕೊಳ್ಳಲು ಆರ್ ಸಿಬಿ ಖಂಡಿತಾ ಇಷ್ಟಪಡದು.

ಗ್ಲೆನ್ ಮ್ಯಾಕ್ಸ್ ವೆಲ್: ಈ ಆವೃತ್ತಿಯಲ್ಲಿ ಆರ್ ಸಿಬಿ ಪರ ನಿಯಮಿತವಾಗಿ ರನ್ ಗಳಿಸಿದ್ದು ಗ್ಲೆನ್ ಮ್ಯಾಕ್ಸ್ ವೆಲ್. ಕೆಳ ಕ್ರಮಾಂಕದಲ್ಲಿ ತಂಡದ ರನ್ ರೇಟ್ ಹೆಚ್ಚಿಸುವ ಹೊಡೆಬಡಿಯ ಆಟಗಾರನನ್ನು ತಂಡ ಉಳಿಸಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಟೀಂ ಇಂಡಿಯಾ ಮೇಲೆ ಟೀಕೆಗಳ ಸುರಿಮಳೆ