Select Your Language

Notifications

webdunia
webdunia
webdunia
webdunia

IPL 2025: ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ: ರಜತ್‌, ಜೋಶ್‌ ಆಗಮನದೊಂದಿಗೆ ಬೆಂಗಳೂರು ತಂಡಕ್ಕೆ ಆನೆಬಲ

Indian Premier League, Royal Challengers Bangalore, Punjab Kings

Sampriya

ಚಂಡೀಗಢ , ಗುರುವಾರ, 29 ಮೇ 2025 (19:12 IST)
Photo Courtesy X
ಚಂಡೀಗಢ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್‌ ಪಂದ್ಯ ಇಂದು ನಡೆಯಲಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಟಾಸ್‌ ಗೆದ್ದ ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟೀದಾರ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿರು. ಗಾಯಾಳಾಗಿದ್ದ ರಜತ್‌ ಚೇತರಿಸಿಕೊಂಡಿದ್ದು, ಪೂರ್ಣಕಾಲಿಕ ನಾಯಕರಾಗಿ ತಂಡಕ್ಕೆ ಮರಳಿದ್ದಾರೆ. ಹಿಂದಿನ ಪಂದ್ಯವನ್ನು ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ತಂಡವನ್ನು ಮುನ್ನಡೆಸಿದ್ದರು. 

ಚೇಸಿಂಗ್‌ನಲ್ಲಿ ಉತ್ತಮವಾಗಿರುವ ಆರ್‌ಸಿಬಿಗೆ ಟಾಸ್ ಗೆಲುವು ಆರಂಭಿಕ ಗೆಲುವಾಗಿದೆ. ರಜತ್ ಪಾಟೀದಾರ್ ನಾಯಕನಾಗಿ ವಾಪಾಸ್ಸಾಗಿದ್ದಾರೆ. ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಜೋಶ್‌ ಹೇಜಲ್‌ವುಡ್ ಆಗಮನದಿಂದ ನುವಾನ್ ತುಷಾರ್ ಸ್ಥಾನ ಕಳೆದುಕೊಂಡಿದ್ದಾರೆ. ಪಂಜಾಬ್ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಮಾರ್ಕೋ ಬದಲು ಅಜ್ಮತುಲ್ಹಾ ತಂಡ ಸೇರಿಕೊಂಡಿದ್ದಾರೆ.

ಲೀಗ್‌ ಹಂತದ ಪಂದ್ಯಗಳು ಮುಕ್ತಯದ ಬಳಿಕ ಪಾಯಿಂಟ್‌ ಪಟ್ಟಿಯಲ್ಲಿ ಕ್ರಮವಾಗಿ ಅಗ್ರಸ್ಥಾನಗಳಲ್ಲಿ ಇರುವ ಪಂಜಾಬ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಚಂಡೀಗಢದ ಮುಲ್ಲನಪುರದಲ್ಲಿ ಮುಖಾಮುಖಿಗೆ ಸಜ್ಜಾಗಿವೆ. ಇಂದು ಜಯಿಸಿದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶವಿದೆ. 

ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್‌ ಟೈಟನ್ಸ್‌, ಮುಂಬೈ ಇಂಡಿಯನ್ಸ್‌ ಶುಕ್ರವಾರ ಎಲಿಮಿನೇಟರ್‌ ಪಂದ್ಯ ಆಡಲಿವೆ. ಇದರಲ್ಲಿ ಗೆದ್ದ ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದೊಂದಿಗೆ ಭಾನುವಾರ ಎರಡನೇ ಕ್ವಾಲಿಫೈಯರ್‌ನಲ್ಲಿ ಎದುರಿಸಲಿದೆ. 




Share this Story:

Follow Webdunia kannada

ಮುಂದಿನ ಸುದ್ದಿ

IPL 2025: PBKS vs RCB ಕ್ವಾಲಿಫೈಯರ್ 1 ಪಂದ್ಯಾಟಕ್ಕೆ ಮಳೆ ಬಂದು ರದ್ದಾದರೆ, ಮುಂದೇನು ಗತಿ