Select Your Language

Notifications

webdunia
webdunia
webdunia
webdunia

ರಾಬಿನ್ ಉತ್ತಪ್ಪ ಬಿಟ್ಟು ದಿನೇಶ್ ಕಾರ್ತಿಕ್ ರನ್ನು ಕೆಕೆಆರ್ ಕ್ಯಾಪ್ಟನ್ ಮಾಡಿದ ಶಾರುಖ್ ಖಾನ್ ಹೇಳಿದ್ದೇನು?

ರಾಬಿನ್ ಉತ್ತಪ್ಪ ಬಿಟ್ಟು ದಿನೇಶ್ ಕಾರ್ತಿಕ್ ರನ್ನು ಕೆಕೆಆರ್ ಕ್ಯಾಪ್ಟನ್ ಮಾಡಿದ ಶಾರುಖ್ ಖಾನ್ ಹೇಳಿದ್ದೇನು?
ಮುಂಬೈ , ಮಂಗಳವಾರ, 6 ಮಾರ್ಚ್ 2018 (10:06 IST)
ಮುಂಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡಕ್ಕೆ ಹೊಸದಾಗಿ ದಿನೇಶ್ ಕಾರ್ತಿಕ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಕಾರ್ತಿಕ್ ತಂಡದ ನೇತೃತ್ವ ವಹಿಸಲಿದ್ದಾರೆ.

ತಮಿಳುನಾಡು ಮೂಲದ ದಿನೇಶ್ ಕಾರ್ತಿಕ್ ರನ್ನು ಕೆಕೆಆರ್ 7.8 ಕೋಟಿ ರೂ.ಗೆ ಖರೀದಿ ಮಾಡಿತ್ತು. ಕರ್ನಾಟಕ ಮೂಲದ, ಇದೀಗ ಸೌರಾಷ್ಟ್ರ ಪರ ಆಡುವ ರಾಬಿನ್ ಉತ್ತಪ್ಪ ಮತ್ತು ದಿನೇಶ್ ಕಾರ್ತಿಕ್ ನಡುವೆ ನಾಯಕತ್ವಕ್ಕೆ ತೀವ್ರ ಪೈಪೋಟಿಯಿತ್ತು.

ಅಂತಿಮವಾಗಿ ಕಾರ್ತಿಕ್ ರನ್ನು ಆಯ್ಕೆ ಮಾಡಿದ ಬಳಿಕ ಮಾಲಿಕ ಶಾರುಖ್ ಖಾನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ನೂತನ ನಾಯಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಹಿಂದಿನ ನಾಯಕ ಗೌತಮ್ ಗಂಭೀರ್ ರಂತೆ ನೀವೂ ತಂಡಕ್ಕೆ ಸ್ಪೂರ್ತಿಯಾಗಿ ಮುನ್ನಡೆಸುತ್ತೀರಿ ಎಂಬ ನಂಬಿಕೆಯಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀ ಬ್ರೇಕ್ ವೇಳೆ ಡೇವಿಡ್ ವಾರ್ನರ್-ಕ್ವಿಂಟನ್ ಡಿ ಕಾಕ್ ನಡುವೆ ನಡೆಯಿತು ವಾರ್!