Select Your Language

Notifications

webdunia
webdunia
webdunia
webdunia

ತವರಿಗೆ ಹೋಗಲಾರದೇ ಅತಂತ್ರರಾದ ಆಸೀಸ್ ಕ್ರಿಕೆಟಿಗರು

ತವರಿಗೆ ಹೋಗಲಾರದೇ ಅತಂತ್ರರಾದ ಆಸೀಸ್ ಕ್ರಿಕೆಟಿಗರು
ಮುಂಬೈ , ಬುಧವಾರ, 5 ಮೇ 2021 (10:11 IST)
ಮುಂಬೈ: ಕೊರೋನಾ ಕಾರಣದಿಂದ ಬಿಸಿಸಿಐ ಐಪಿಎಲ್ ಅಮಾನತು ಮಾಡಿದ ಬೆನ್ನಲ್ಲೇ ಈಗ ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗರಿಗೆ ಸ್ಥಿತಿ ಅತಂತ್ರವಾಗಿದೆ.


ಆಸ್ಟ್ರೇಲಿಯಾ ಸರ್ಕಾರ ಮೇ 15 ರವರೆಗೆ ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದೆ. ನಿಯಮ ಮೀರಿ ಆಸ್ಟ್ರೇಲಿಯಾಕ್ಕೆ ಬಂದರೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.

ಇತ್ತ ಕ್ರಿಕೆಟ್ ಆಸ್ಟ್ರೇಲಿಯಾ ಕೂಡಾ ಸರ್ಕಾರದ ನಿರ್ಧಾರವನ್ನು ಒಪ್ಪಿಕೊಳ್ಳಲೇಬೇಕಾದ ಸ್ಥಿತಿಯಲ್ಲಿದೆ. ಹೀಗಾಗಿ ಈಗ ಭಾರತದಲ್ಲಿ ಐಪಿಎಲ್ ಆಡಲು ಬಂದಿಳಿದಿರುವ ಕ್ರಿಕೆಟಿಗರು ತವರಿಗೆ ಮರಳಲು ಆಸೀಸ್ ಸರ್ಕಾರದ ಒಪ್ಪಿಗೆಗಾಗಿ ಕಾಯುವ ಸ್ಥಿತಿ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇ 5 ರಿಂದ ವಿದೇಶೀ ಐಪಿಎಲ್ ಆಟಗಾರರು ತವರಿಗೆ