Select Your Language

Notifications

webdunia
webdunia
webdunia
webdunia

ಐಪಿಎಲ್ ಮುಂದೂಡಿಕೆಯಾಗಿದ್ದರಿಂದ ಕೆಎಲ್ ರಾಹುಲ್ ಗೆ ಲಾಭ!

ಐಪಿಎಲ್ ಮುಂದೂಡಿಕೆಯಾಗಿದ್ದರಿಂದ ಕೆಎಲ್ ರಾಹುಲ್ ಗೆ ಲಾಭ!
ಮುಂಬೈ , ಬುಧವಾರ, 5 ಮೇ 2021 (09:31 IST)
ಮುಂಬೈ: ಕೊರೋನಾ ಕಾರಣದಿಂದ ಐಪಿಎಲ್ ಮುಂದೂಡಿಕೆಯಾಗಿದ್ದರಿಂದ ಯಾರಿಗೆಲ್ಲಾ ನಷ್ಟವಾಗುತ್ತದೋ ಬಿಡುತ್ತದೋ, ಕಿಂಗ್ಸ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಗೆ ಮಾತ್ರ ಲಾಭವಾಗಲಿದೆ.


ಅಪೆಂಡಿಟಿಸೈಟಿಸ್ ಗೊಳಗಾಗಿರುವ ರಾಹುಲ್ ಈಗ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಕಳೆದ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಅಷ್ಟೇ ಅಲ್ಲ, ತಕ್ಷಣವೇ ಅವರಿಗೆ ಐಪಿಎಲ್ ತಂಡ ಕೂಡಿಕೊಳ್ಳುವುದು ಕಷ್ಟವಾಗಿತ್ತು.

ರಾಹುಲ್ ಮತ್ತೆ ತಂಡ ಕೂಡಿಕೊಳ್ಳಬೇಕಾದರೆ ಕ್ವಾರಂಟೈನ್ ಅವಧಿ ಮುಗಿಸಿ ಬಳಿಕವಷ್ಟೇ ಬಯೋ ಬಬಲ್ ವಾತಾವರಣಕ್ಕೆ ಸೇರಿಕೊಳ್ಳಬೇಕಿತ್ತು. ಇದಕ್ಕೆ ದಿನಗಳು ಬೇಕಾಗಿದ್ದವು. ಹೀಗಾಗಿ ಐಪಿಎಲ್ ಮುಂದೂಡಿಕೆಯಾಗಿರುವುದರಿಂದ ರಾಹುಲ್ ಮತ್ತು ಪಂಜಾಬ್ ಪಡೆಗೆ ಲಾಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಮುಂದೂಡಿಕೆ ಮಾಡಿದ ಬಳಿಕ ಬಿಸಿಸಿಐ ಹೇಳಿಕೆ