ಐಪಿಎಲ್: ಧೋನಿ ಮೇಲಿರುವ ಸ್ಥಳೀಯರ ಅಭಿಮಾನಿ ವಿರಾಟ್ ಕೊಹ್ಲಿ ಆರ್ ಸಿಬಿ ಮೇಲಿಲ್ಲ ಯಾಕೆ ಗೊತ್ತಾ?!

Webdunia
ಮಂಗಳವಾರ, 9 ಏಪ್ರಿಲ್ 2019 (09:21 IST)
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಇಷ್ಟು ವರ್ಷ ಐಪಿಎಲ್ ಆಡಿದ ಬಳಿಕ ಧೋನಿ ತಮಿಳುನಾಡಿನ ಮನೆ ಮಗನಾಗಿಯೇ ಬದಲಾಗಿದ್ದಾರೆ. ಆದರೆ ಇಷ್ಟು ವರ್ಷದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿಯೇ ಆಡಿದರೂ ಕನ್ನಡಿಗರಿಗೆ ಹತ್ತಿರವಾಗಿಲ್ಲ ಯಾಕೆ?


ಚೆನ್ನೈ ತಂಡ ಕೂಡಿಕೊಂಡ ಧೋನಿ ಅಲ್ಲಿನವರಂತೇ ಭಾಷಾಭಿಮಾನ ಬೆಳೆಸಿಕೊಂಡರು. ಅಲ್ಲಿನ ಅಭಿಮಾನಿಗಳಿಂದಲೇ ತಲೈವಾ ಎನಿಸಿಕೊಂಡರು. ತಮ್ಮ ತಂಡದ ಬಗ್ಗೆ, ಅಭಿಮಾನಿಗಳ ಬಗ್ಗೆ ಪ್ರತ್ಯೇಕ ಪ್ರೀತಿ ಬೆಳೆಸಿಕೊಂಡರು. ಅವಕಾಶ ಸಿಕ್ಕಾಗಲೆಲ್ಲಾ ಧೋನಿ ತಮಿಳನ್ನೂ ಅಲ್ಪ ಸ್ವಲ್ಪ ಕಲಿತುಕೊಂಡರು. ಹೀಗಾಗಿಯೇ ಧೋನಿ ಅಲ್ಲಿ ಮನೆ ಮಗನಂತೆ ಪ್ರೀತಿ ಬೆಳೆಸಿಕೊಂಡರು.

ಆದರೆ ವಿರಾಟ್ ಕೊಹ್ಲಿ ಹಾಗಲ್ಲ. ಮೊದಲನೆಯದಾಗಿ ರಾಯಲ್ ಚಾಲೆಂಜರ್ಸ್ ನಲ್ಲಿ ಕನ್ನಡಿಗ ಆಟಗಾರರೇ ಇಲ್ಲ. ಕೋಚ್ ಕೂಡಾ ಇಲ್ಲಿನವರಲ್ಲ. ಅಲ್ಲದೆ ಕೊಹ್ಲಿ ಯಾವತ್ತೂ ಸ್ಥಳೀಯರಂತೆ ಇಲ್ಲಿನವರ ಅಭಿಮಾನಕ್ಕೆ ಒಗ್ಗಿಕೊಳ್ಳುವ ಮನೋಭಾವ ತೋರಲೇ ಇಲ್ಲ. ಗೆಲುವು ಮೊದಲೇ ಇಲ್ಲ.

ಬೇರೆಲ್ಲಾ ತಂಡಗಳಂತೆ ಸ್ಥಳೀಯ ಭಾಷೆ, ಸಂಸ್ಕೃತಿ, ನೃತ್ಯ ಇತ್ಯಾದಿ ಮನೋರಂಜನೆಗಳನ್ನು ಆರ್ ಸಿಬಿ ಆಟಗಾರರು ಪ್ರದರ್ಶಿಸುವುದೇ ಇಲ್ಲ. ಹೀಗಾಗಿಯೇ ತವರಿನ ಅಭಿಮಾನಿಗಳಿಗೆ ಆರ್ ಸಿಬಿ ಹತ್ತಿರವಾಗಲೇ ಇಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಸಮಯ ವಿವರ ಇಲ್ಲಿದೆ

ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಹೊರಗೊಂದು ಒಳಗೊಂದು ಹೇಳುತ್ತಿದ್ದಾರಾ

ಆರ್ ಸಿಬಿಗೆ ಹೊಸ ಮಾಲಿಕರು ಬಂದರೆ ಹೆಸರೂ ಬದಲಾಗುತ್ತಾ

ರವೀಂದ್ರ ಜಡೇಜಾರನ್ನು ಸೇಲ್ ಮಾಡಲು ಹೊರಟ ಸಿಎಸ್ ಕೆ: ಸ್ವಲ್ಪವಾದ್ರೂ ಕೃತಜ್ಞತೆ ಬೇಡ್ವಾ ಫ್ಯಾನ್ಸ್ ಗರಂ

ಗಾಯಗೊಂಡು ತಂಡದಿಂದ ಹೊರಬಿದ್ದರೂ ಪ್ರತೀಕಾ ರಾವಲ್‌ಗೆ ಚಿನ್ನ ಪದಕ ಸಿಗಲು ಇವರ ಕೃಪೆಯೇ ಕಾರಣ

ಮುಂದಿನ ಸುದ್ದಿ
Show comments