Select Your Language

Notifications

webdunia
webdunia
webdunia
webdunia

ಐಪಿಎಲ್: ಮೊದಲ ಪಂದ್ಯದಲ್ಲೇ ಜನ ಮೆಚ್ಚುವ ಕೆಲಸಕ್ಕೆ ಮುಂದಾದ ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್: ಮೊದಲ ಪಂದ್ಯದಲ್ಲೇ ಜನ ಮೆಚ್ಚುವ ಕೆಲಸಕ್ಕೆ ಮುಂದಾದ ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ , ಶುಕ್ರವಾರ, 22 ಮಾರ್ಚ್ 2019 (08:55 IST)
ಚೆನ್ನೈ: ಐಪಿಎಲ್ ಪಂದ್ಯಾವಳಿಗೆ ನಾಳೆ ಚೆನ್ನೈನಲ್ಲಿ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದೆ.


ಈ ಬಾರಿ ಭಾರತೀಯ ಹುತಾತ್ಮ ಯೋಧರ ಗೌರವಾರ್ಥ ಐಪಿಎಲ್ ಗೆ ಸರಳವಾಗಿ ಚಾಲನೆ ನೀಡಲು ಬಿಸಿಸಿಐ ಈ ಮೊದಲೇ ತೀರ್ಮಾನಿಸಿತ್ತು. ಉದ್ಘಾಟನೆ ಸಮಾರಂಭಕ್ಕೆ ತಗಲಬೇಕಿದ್ದ ಖರ್ಚನ್ನು ಹುತಾತ್ಮ ಯೋಧರಿಗೆ ನೀಡುವುದಾಗಿ ಘೋಷಿಸಿತ್ತು.

ಇದೀಗ ಅದೇ ಹಾದಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಸಾಗಿದೆ. ನಾಳೆ ನಡೆಯಲಿರುವ ಉದ್ಘಾಟನಾ ಪಂದ್ಯದಿಂದ ಬರುವ ಲಾಭಾಂಶವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೀಡಲು ಸಿಎಸ್ ಕೆ ತಂಡ ತೀರ್ಮಾನಿಸಿದೆ. ಈ ಮೂಲಕ ಮೊದಲ ಪಂದ್ಯದಲ್ಲಿಯೇ ಧೋನಿ ತಂಡ ಜನ ಮೆಚ್ಚುವ ಕೆಲಸ ಮಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಧೋನಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಾರೆ? ಬಹಿರಂಗಪಡಿಸಿದ ಕೋಚ್