Webdunia - Bharat's app for daily news and videos

Install App

India Pakistan: ನೀರು ಮಾತ್ರವಲ್ಲ ಪಾಕಿಸ್ತಾನಕ್ಕೆ ಔಷಧಿಯೂ ಸಿಗದಂತೆ ಮಾಡಿದ ಭಾರತ: ಪಾಕ್

Krishnaveni K
ಭಾನುವಾರ, 27 ಏಪ್ರಿಲ್ 2025 (11:19 IST)
ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರ ದಾಳಿಯ ಬಳಿಕ ಪಾಕಿಸ್ತಾನದ ಒಂದೊಂದೇ ರೆಕ್ಕೆ ಮುರಿಯುತ್ತಿರುವ ಭಾರತ ಈಗ ನೀರಿನ ಬಳಿಕ ಔಷಧಿ ಸಿಗದಂತೆ ಮಾಡಿ ಮರ್ಮಾಘಾತ ನೀಡಿದೆ.

ಜಮ್ಮು ಕಾಶ್ಮೀರದಲ್ಲಿರನ್ನು ಛೂ ಬಿಡಲು ಪಾಕಿಸ್ತಾನವೇ ಕಾರಣ ಎನ್ನುವುದು ಇಡೀ ವಿಶ್ವಕ್ಕೇ ಗೊತ್ತಿರುವ ಸಂಗತಿ. ತನ್ನ ದೇಶದಲ್ಲಿ ಉಗ್ರರನ್ನು ಸಾಕಿ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಛೂ ಬಿಡುತ್ತಿರುವ ಪಾಕಿಸ್ತಾನಕ್ಕೆ ಭಾರತ ರಾಜತಾಂತ್ರಿಕ ಮಾರ್ಗದಲ್ಲಿಯೇ ಪೆಟ್ಟು ನೀಡುತ್ತಿದೆ.

ಸಿಂಧೂ ನದಿ ಒಪ್ಪಂದ ಮುರಿಯುವ ಮೂಲಕ ನೀರು ಸಿಗದಂತೆ ಮಾಡಿದೆ. ಅಟ್ಟಾರಿ-ವಾಘಾ ಗಡಿ ಮುಚ್ಚುವ ಮೂಲಕ ಎರಡೂ ದೇಶಗಳ ನಡುವಿನ ಸಂಪರ್ಕ ಬಂದ್ ಮಾಡಿದೆ. ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದುಗೊಳಿಸಿ ನಾಗರಿಕರನ್ನು ಗಡೀಪಾರು ಮಾಡಿದೆ.

ಇದರ ಬೆನ್ನಲ್ಲೇ ಪಾಕಿಸ್ತಾನ ಕೂಡಾ ಭಾರತದೊಂದಿಗೆ ಎಲ್ಲಾ ವ್ಯಾಪಾರ ವಹಿವಾಟಿಗೂ ನಿರ್ಬಂಧ ವಿಧಿಸಿತ್ತು. ಆದರೆ ಇದರ ಪರಿಣಾಮ ಆ ದೇಶಕ್ಕೇ ತಟ್ಟುತ್ತಿದೆ. ಪಾಕಿಸ್ತಾನಕ್ಕೆ ಈಗ ಬೇಕಾದ ಔಷಧಿಯೂ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಔಷಧ ಪೂರೈಕೆಗೆ ಪರ್ಯಾಯ ಮಾರ್ಗ ಹುಡುಕುವಂತಾಗಿದೆ. ರೇಬಿಸ್ ತಡೆ, ಲಸಿಕೆಗಳು, ವಿಷ ವಿರೋಧಿ, ಕ್ಯಾನರ್ ಔಷಧಿಗಳು ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಭಾರತದಿಂದ ಪೂರೈಕೆಯಾಗುತ್ತಿತ್ತು. ಆದರೆ ಈಗ ವ್ಯಾಪಾರ ವಾಣಿಜ್ಯ  ವಹಿವಾಟು ಬಂದ್ ಮಾಡಿರುವುದರಿಂದ ಇದೆಲ್ಲದಕ್ಕೂ ತಡೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಯುದ್ಧ ಬೇಡ ಎಂದ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಫುಲ್ ಫೇಮಸ್ Video

Gold Price today: ಚಿನ್ನದ ದರ ಇಂದು ಮತ್ತೆ ಏರಿಕೆ, ಎಷ್ಟಾಗಿದೆ ನೋಡಿ

Shahid Afridi: ಪಹಲ್ಗಾಮ್ ದಾಳಿ ಮಾಡಿದ್ದು ನಾವು ಎನ್ನುವುದಕ್ಕೆ ಏನು ಸಾಕ್ಷ್ಯವಿದೆ: ಪಾಕಿಸ್ತಾನ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪ್ರಶ್ನೆ

ಬಪ್ಪನಾಡು ತೇರು ಬಿದ್ದ ಘಟನೆ: ಅಪಾಯದ ಎಚ್ಚರಿಕೆ ನೀಡಿದ ದೈವ

India Pakistan: ಪಾಕಿಸ್ತಾನಕ್ಕೆ ಸುಮ್ನೇ ಕೂರಲು ಬಿಡದೇ ಕಾಟ ಕೊಡ್ತಿರುವ ಭಾರತ

ಮುಂದಿನ ಸುದ್ದಿ
Show comments