Pehalgam: ಭಾರತೀಯ ಸೇನೆಯ ಆಕ್ರೋಶಕ್ಕೆ ಹೈರಾಣಾದ ಪಹಲ್ಗಾಮ್ ಉಗ್ರ ಆದಿಲ್ ಹುಸೇನ್ ಕುಟುಂಬಸ್ಥರು ಹೇಳಿದ್ದೇನು

Krishnaveni K
ಭಾನುವಾರ, 27 ಏಪ್ರಿಲ್ 2025 (11:05 IST)
Photo Credit: X
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಉಗ್ರರಲ್ಲಿ ಓರ್ವನಾದ ಆದಿಲ್ ಹುಸೇನ್ ಥೋಕರ್ ಕೂಡಾ ಒಬ್ಬಾತ. ಇದೀಗ ಭಾರತೀಯ ಸೇನೆಯ ಆಕ್ರೋಶಕ್ಕೆ ಹೈರಾಣಾದ ಉಗ್ರನ ಕುಟುಂಬ ಹೇಳಿರುವುದು ಏನು ನೋಡಿ.

ಪಹಲ್ಗಾಮ್ ನಲ್ಲಿ ದಾಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದ ಉಗ್ರರ ಮನೆಗಳನ್ನು ಸೇನೆ ಈಗ ಸ್ಪೋಟಿಸಿ ಧ್ವಂಸಗೊಳಿಸುತ್ತಿದೆ. ಅದರಂತೆ ಅದಿಲ್ ಹುಸೇನ್ ಮನೆಯನ್ನೂ ಭಾರತೀಯ ಸೇನೆ ಸ್ಪೋಟಕ ಬಳಸಿ ಧ್ವಂಸಗೊಳಿಸಿತ್ತು.

ಇದರಿಂದ ಆತನ ಕುಟುಂಬಸ್ಥರು ಈಗ ನಿರಾಶ್ರಿತರಾಗಿದ್ದಾರೆ. ಸ್ಪೋಟಿಸುವ ಮೊದಲು ಅದಿಲ್ ತಾಯಿ, ಸೇರಿದಂತೆ ಕುಟುಂಬಸ್ಥರು ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು. ಆದರೆ ಮನೆ ಮಠ ಕಳೆದುಕೊಂಡು ಈಗ ಕುಟುಂಬ ಬೀದಿಗೆ ಬಿದ್ದಿದೆ.

ಭಾರತೀಯ ಸೇನೆಯ ಆಕ್ರೋಶಕ್ಕೆ ಬೆಚ್ಚಿಬಿದ್ದಿರುವ ಕುಟುಂಬ ‘ಆದಿಲ್ ನಮ್ಮ ಜೊತೆ 2018 ರಿಂದಲೂ ಸಂಪರ್ಕದಲ್ಲಿಲ್ಲ. ಪರೀಕ್ಷೆಗೆಂದು ಮನೆ ಬಿಟ್ಟು ಹೋದವನು ಪತ್ತೆಯಿರಲಿಲ್ಲ, ಫೋನ್ ಕೂಡಾ ಸ್ವಿಚ್ ಆಫ್ ಮಾಡಿಕೊಂಡಿದ್ದ. ಹೀಗಾಗಿ ನಾವು ನಾಪತ್ತೆಯಾಗಿರುವುದಾಗಿ ಮೂರು ದಿನಗಳ ಬಳಿಕ ದೂರು ಕೂಡಾ ನೀಡಿದ್ದೆವು.

ಒಂದು ವೇಳೆ ಆತ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದು ನಿಜವಾಗಿದ್ದಲ್ಲಿ ಆತನಿಗೆ ಶಿಕ್ಷೆಯಾಗಲಿ. ಆದರೆ ಈಗ ಆತ ಶರಣಾಗಲಿ. ಇದರಿಂದ ನಾವಾದ್ರೂ ಶಾಂತಿಯಿಂದ ಜೀವನ ಮಾಡಬಹುದು’ ಎಂದು ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ಮುಂದಿನ ಸುದ್ದಿ
Show comments