Siddaramaiah: ಯುದ್ಧ ಬೇಡ ಎಂದ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಫುಲ್ ಫೇಮಸ್ Video

Krishnaveni K
ಭಾನುವಾರ, 27 ಏಪ್ರಿಲ್ 2025 (10:16 IST)
ಬೆಂಗಳೂರು: ಪಾಕಿಸ್ತಾನದ ಜೊತೆ ಪಹಲ್ಗಾಮ್ ದಾಳಿಯ ಬಳಿಕವೂ ಯುದ್ಧ ಅಗತ್ಯವಿಲ್ಲ ಎಂದಿದ್ದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಈಗ ಪಾಕಿಸ್ತಾನದಲ್ಲೂ ಫೇಮಸ್ ಆಗಿದ್ದಾರೆ.

ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ, ಪಾಕಿಸ್ತಾನದ ಜೊತೆ ಯುದ್ಧ ಅಗತ್ಯವಿಲ್ಲ. ನಮಗೆ ಶಾಂತಿ ಮುಖ್ಯ. ಬಿಗಿ ಕ್ರಮಗಳನ್ನು ಕೈಗೊಳ್ಳಲಿ, ಭದ್ರತೆ ಹೆಚ್ಚಿಸಲಿ ಎಂದಿದ್ದರು. ಅವರ ಹೇಳಿಕೆ ಈಗ ಪಾಕಿಸ್ತಾನದಲ್ಲೂ ಫೇಮಸ್ ಆಗಿದೆ.

ಅಲ್ಲಿನ ಕೆಲವು ಮಾಧ್ಯಮಗಳೂ ಸಿದ್ದರಾಮಯ್ಯ ಹೇಳಿಕೆಯನ್ನು ಪ್ರಸಾರ ಮಾಡಿವೆ. ಸಿದ್ದರಾಮಯ್ಯನವರ ಹೇಳಿಕೆ ಪ್ರಶಂಸಿಸಿ ಪಾಕ್ ಟಿವಿ ವಾಹಿನಿಯ ವರದಿಯೊಂದನ್ನು ವಿಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯನವರು ಪಾಕಿಸ್ತಾನದ ಕೈಗೊಂಬೆಯಂತಹ ಹೇಳಿಕೆಯಿಂದ ವರ್ಲ್ಡ್ ಫೇಮಸ್ ಆಗಿದ್ದಾರೆ. ಮುಂದೆ ಪಾಕಿಸ್ತಾನದವರು ಸಿದ್ದರಾಮಯ್ಯ ಹೇಳಿಕೆಯನ್ನು ಮೆಚ್ಚಿ ನಿಶಾನ್ ಎ ಪಾಕಿಸ್ತಾನ್ ಪ್ರಶಸ್ತಿ ಕೊಟ್ಟರೂ ಅಚ್ಚರಿಯಿಲ್ಲ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ, ಈ ವಿಧಾನ ಅನುಸರಿಸಿ

Gold Price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Video: ಹಿಂದುತ್ವ ವಿಶ್ವಕ್ಕೇ ಮಾರಕ ಎಂದ ಪಾಕಿಸ್ತಾನ ಪ್ರಧಾನಿ: ಮೊದಲು ನಿಮ್ ದೇಶದ ಜನರಿಗೆ ಊಟ ಕೊಡಿ ಎಂದ ಪಬ್ಲಿಕ್

ಸುಳ್ಳುಗಳ ಮೂಟೆ ಬಿಟ್ಟ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲೇ ತಿರುಗೇಟು ಕೊಟ್ಟ ಭಾರತ

ಮುಂದಿನ ಸುದ್ದಿ
Show comments