Webdunia - Bharat's app for daily news and videos

Install App

ಅಬುಧಾಮಿಯಲ್ಲಿ ಸಂಚಾರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ

Webdunia
ಗುರುವಾರ, 26 ಜುಲೈ 2018 (11:35 IST)
ಅಬುಧಾಮಿ : ಅಬುಧಾಮಿಯಲ್ಲಿ ಸಂಚಾರ ಸುರಕ್ಷತೆಗಾಗಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು , ಅದರ ಪ್ರಕಾರ ಅಲ್ಲಿನ 'ವೇಗ ವಲಯ' (ಸ್ಪೀಡ್ ಬಫರ್)ವನ್ನು ತೆಗೆದುಹಾಕಲಾಗಿದೆ.


ಈ ವಿಚಾರವನ್ನು ಅಬುಧಾಬಿ ಪೊಲೀಸ್‌ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಮುಹಮ್ಮದ್ ಖಲ್ಫಾನ್ ಅಲ್ ರುಮೈತಿ ಅವರು ತಿಳಿಸಿದ್ದು, ‘ಆಗಸ್ಟ್ 12ರಿಂದ ರಾಜಧಾನಿಯಲ್ಲಿ ಎಲ್ಲ ವೇಗ ಮಿತಿಗಳು ಬದಲಾಗುವುದು ಹಾಗೂ ಎಲ್ಲ ರಸ್ತೆಗಳಲ್ಲಿರುವ ವೇಗ ವಲಯವನ್ನು ತೆಗೆದುಹಾಕಲಾಗುವುದು. ಸಂಚಾರ ಸುರಕ್ಷತೆ ಅಧ್ಯಯನ ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.


ಪ್ರಸಕ್ತ, ರಾಜಧಾನಿಯಲ್ಲಿನ ಹೆಚ್ಚಿನ ರಸ್ತೆಗಳಲ್ಲಿ ವೇಗ ವಲಯವಿದೆ. ಈ ವಲಯಗಳಲ್ಲಿ, ಆ ರಸ್ತೆಗಳ ಗರಿಷ್ಠ ವೇಗ ಮಿತಿಗಿಂತ 20 ಕಿ.ಮೀ. (ಗಂಟೆಗೆ) ಹೆಚ್ಚು ವೇಗದಲ್ಲಿ ಹೋಗಬಹುದಾಗಿದೆ. ಇದಕ್ಕೆ ದಂಡ ಹಾಕಲಾಗುವುದಿಲ್ಲ. ಆದರೆ, ಆಗಸ್ಟ್ 12ರ ಬಳಿಕ, ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ರಸ್ತೆಯಲ್ಲಿ 101 ಕಿ.ಮೀ. ವೇಗದಲ್ಲಿ ಹೋದರೆ ದಂಡ ವಿಧಿಸಲಾಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments