Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ಭೇಟಿ ಬಳಿಕ ಇಂದು ಸಿದ್ದರಾಮಯ್ಯ ರಾಜಧಾನಿಗೆ ವಾಪಸ್

ಧರ್ಮಸ್ಥಳ ಭೇಟಿ ಬಳಿಕ ಇಂದು ಸಿದ್ದರಾಮಯ್ಯ ರಾಜಧಾನಿಗೆ ವಾಪಸ್
ಬೆಂಗಳೂರು , ಗುರುವಾರ, 28 ಜೂನ್ 2018 (09:09 IST)
ಬೆಂಗಳೂರು: ಉಜಿರೆಯ ಶಾಂತಿವನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ 12 ದಿನಗಳ ಚಿಕಿತ್ಸೆ ಮುಗಿಸಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜಧಾನಿಗೆ ವಾಪಸಾಗಲಿದ್ದಾರೆ.

ಇಂದು 10 ಗಂಟೆಗೆ ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ ಭೇಟಿ ನೀಡಲಿರುವ ಸಿದ್ದರಾಮಯ್ಯ ಪೂಜೆ ನೆರವೇರಿಸಿ ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ದೇವಾಲಯ ಮೂಲಗಳಿಂದ ತಿಳಿದುಬಂದಿದೆ.

ಸಿದ್ದರಾಮಯ್ಯ ಶಾಂತಿವನಕ್ಕೆ ದಾಖಲಾದ ದಿನದಿಂದಲೂ ಧರ್ಮಸ್ಥಳ ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದು ಭಾರೀ ಸುದ್ದಿಯಾಗಿತ್ತು. ಸಿದ್ದರಾಮಯ್ಯ ಇಲ್ಲಿದ್ದ ಅಷ್ಟೂ ದಿನ ಘಟಾನುಘಟಿ ನಾಯಕರೆಲ್ಲಾ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರಾಂಗ್ ನಂಬರ್ ಗೆ ಕಾಲ್ ಮಾಡಿ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಂಡ! ಆದರೆ ಮುಂದೆ ನಡೆದಿದ್ದೇನು?!