Webdunia - Bharat's app for daily news and videos

Install App

ನಮ್ಮ ನೆಲದಿಂದ ಜಾಗ ಖಾಲಿ ಮಾಡಿ: ಭಾರತೀಯ ಸೇನೆಗೆ ಮಾಲ್ಡೀವ್ಸ್ ಹುಕುಂ

Krishnaveni K
ಸೋಮವಾರ, 15 ಜನವರಿ 2024 (07:45 IST)
ನವದೆಹಲಿ: ನಮ್ಮ ದೇಶದಿಂದ ಆದಷ್ಟು ಬೇಗ ನಿಮ್ಮ ಸೇನೆಯನ್ನು ಹಿಂಪಡೆಯಬೇಕು ಎಂದು ಮಾಲ್ಡೀವ್ಸ್ ದೇಶ ಭಾರತಕ್ಕೆ ಗಡುವು ನೀಡಿದೆ.

ಇತ್ತೀಚೆಗೆ ಮಾಲ್ಡೀವ್ಸ್ ಜೊತೆಗೆ ಭಾರತದ ಸಂಬಂಧ ಹಳಸಲು ಮುಖ್ಯ ಕಾರಣವೇ ಇದು. ಮೊದಲು ಮಾಲ್ಡೀವ್ಸ್ ಅಲ್ಲಿನ ಭಾರತೀಯ ಸೇನೆಯನ್ನು ಹಿಂಪಡೆಯಲು ಸೂಚಿಸಿತ್ತು. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಪ್ರವಾಸೋದ್ಯಮದ ಅವಕಾಶವನ್ನು ಜಗತ್ತಿಗೆ ಸಾರಿದ್ದು, ಮಾಲ್ಡೀವ್ಸ್ ಗೆ ನುಂಗಲಾರದ ತುತ್ತಾಗಿತ್ತು.

ಇದೇ ಕಾರಣಕ್ಕೆ ಹೊಟ್ಟೆ ಉರಿದುಕೊಂಡಿದ್ದ ಮಾಲ್ಡೀವ್ಸ್ ನಮ್ಮ ಪ್ರಧಾನಿ ಮತ್ತು ದೇಶದ ಬಗ್ಗೆ ಅವಹೇಳನಕಾರೀ ಹೇಳಿಕೆ ನೀಡಿದ್ದರು. ಇದು ಭಾರತೀಯರನ್ನು ಕೆರಳಿಸಿತ್ತು. ಇದರ ಬೆನ್ನಲ್ಲೇ ಚೀನಾಕ್ಕೆ ತೆರಳಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝುಗೆ ಅಲ್ಲಿನ ಬೆಂಬಲ ಸಿಕ್ಕಿದ್ದು, ಹುಂಬು ಧೈರ್ಯ ಬಂದಂತಾಗಿತ್ತು.

ಚೀನಾಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಮೊಯಿಝು ನಮ್ಮನ್ನು ಬೆದರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಭಾರತಕ್ಕೆ ಟಾಂಗ್ ಕೊಟ್ಟಿದ್ದರು. ಇದೀಗ ಮಾರ್ಚ್ 15 ರೊಳಗಾಗಿ ನಮ್ಮ ದೇಶದಿಂದ ನಿಮ್ಮ ಸೈನಿಕರನ್ನು ಹಿಂಪಡೆದುಕೊಳ್ಳಬೇಕು ಎಂದು ಗಡುವು ನೀಡಿದೆ. ಸರ್ಕಾರಿ ಅಂಕಿ ಅಂಶದ ಪ್ರಕಾರ 88 ಭಾರತೀಯ ಸೈನಿಕರು ಮಾಲ್ಡೀವ್ಸ್ ನಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು,ಬೆಳಗಾವಿ ಸೇರಿ 3 ವಂದೇ ಭಾರತ್ ರೈಲುಗಳ ಉದ್ಘಾಟನೆ

ಧರ್ಮಸ್ಥಳ: ಗುಂಪು ಘರ್ಷಣೆ ಪ್ರಕರಣದಲ್ಲಿ ಬಿಗ್‌ಟ್ವಿಸ್ಟ್‌

ಕೇಂದ್ರ ವಿರುದ್ಧ ಹರಿಹಾಯ್ದ ಬೆನ್ನಲ್ಲೇ ಪ್ರಧಾನಿ ಮೋದಿ ಪಕ್ಕದಲ್ಲೇ ಕುಳಿತು ಪ್ರಯಾಣಿಸಿದ ಡಿಕೆ ಶಿವಕುಮಾರ್‌

ಸಿಲಿಕಾನ್‌ ಸಿಟಿಯಲ್ಲಿ ಮೋದಿ ಮೇನಿಯಾ: ಪ್ರಧಾನಿಯನ್ನು ನೋಡಲು ಮಳೆಯನ್ನು ಲೆಕ್ಕಿಸದೆ ಜಮಾಯಿಸಿದ ಜನರು

ಹಳದಿ ಮಾರ್ಗಕ್ಕೆ ಕೇಂದ್ರ ನೀಡಿದ್ದು ಕೇವಲ ಶೇ 20ರಷ್ಟು ಅನುದಾನ: ಡಿಸಿಎಂ ಶಿವಕುಮಾರ್‌ ಆಕ್ರೋಶ

ಮುಂದಿನ ಸುದ್ದಿ
Show comments