Publish Date: Mon, 21 Dec 2020 (10:23 IST)
Updated Date: Mon, 21 Dec 2020 (10:24 IST)
ನವದೆಹಲಿ: ಚೀನಾ ಜತೆ ಸೇರಿಕೊಂಡು ಭಾರತದ ವಿರುದ್ಧವೇ ಕತ್ತಿ ಮಸೆಯುತ್ತಿದ್ದ ಕೆಪಿ ಒಲಿ ನೇತೃತ್ವದ ನೇಪಾಳ ಸರ್ಕಾರ ವಿಸರ್ಜನೆಯಾಗಿದೆ. ಸ್ವಪಕ್ಷೀಯರ ಬೆಂಬಲ ಕಳೆದುಕೊಂಡು ಒಲಿ ಅನಿವಾರ್ಯವಾಗಿ ಪದತ್ಯಾಗ ಮಾಡಬೇಕಾಗಿ ಬಂದಿದೆ.
ಸರ್ಕಾರಕ್ಕೆ ತಕ್ಕ ಬೆಂಬಲ ಸಿಗದ ಕಾರಣ ಸರ್ಕಾರ ವಿಸರ್ಜಿಸಲು ರಾಷ್ಟಾಧ್ಯಕ್ಷೆಗೆ ಶಿಫಾರಸ್ಸು ಮಾಡಿದ್ದಾರೆ. ಭಾರತದ ಜತೆಗೆ ನಕ್ಷೆ ವಿವಾದ, ಕೊರೋನಾಕ್ಕೆ ಭಾರತವೇ ಕಾರಣ ಎಂಬ ಹೇಳಿಕೆ ಜತೆಗೆ ಗಡಿಯಲ್ಲಿ ಭಾರತದೊಂದಿಗೆ ಕಿರಿಕ್ ಇತ್ಯಾದಿಗಳಿಂದಾಗಿ ಕೆಪಿ ಒಲಿ ಚೀನಾ ಜತೆ ಸೇರಿಕೊಂಡು ಭಾರತಕ್ಕೆ ತಲೆನೋವಾಗಿದ್ದರು.