Select Your Language

Notifications

webdunia
webdunia
webdunia
webdunia

ರಾಮಮಂದಿರ ನಿರ್ಮಾಣಕ್ಕೆ ವ್ಯಂಗ್ಯ ಮಾಡಿದ ಪಾಕ್ ಗೆ ಭಾರತದ ತಿರುಗೇಟು

ರಾಮಮಂದಿರ ನಿರ್ಮಾಣಕ್ಕೆ ವ್ಯಂಗ್ಯ ಮಾಡಿದ ಪಾಕ್ ಗೆ ಭಾರತದ ತಿರುಗೇಟು
ನವದೆಹಲಿ , ಬುಧವಾರ, 10 ಜೂನ್ 2020 (11:00 IST)
ನವದೆಹಲಿ: ದೇಶದಲ್ಲಿ ಕೊರೋನಾ ಹಾವಳಿ ಮಿತಿ ಮೀರಿದ್ದರೂ ಭಾರತದ ಸರ್ಕಾರಕ್ಕೆ ರಾಮ ಮಂದಿರ ನಿರ್ಮಾಣ ವಿಚಾರವೇ ದೊಡ್ಡ ವಿಷಯವಾಗಿದೆ ಎಂದು ವ್ಯಂಗ್ಯ ಮಾಡಿದ್ದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.


ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ತೊಡಗಿರುವ ಭಾರತ ಸರ್ಕಾರ ದೇಶದಲ್ಲಿ ತನ್ನ ಹಿಂದುತ್ವ ಅಜೆಂಡಾವನ್ನು ವಿಸ್ತರಿಸಲು ಹೊರಟಿದೆ ಎಂದು ಪಾಕ್ ವ್ಯಂಗ್ಯ ಮಾಡಿತ್ತು.

ಇದಕ್ಕೆ ತಿರುಗೇಟು ಕೊಟ್ಟಿರುವ ಭಾರತ ನಿಮಗೆ ಸಂಬಂಧಪಡದ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಮೊದಲು ನಿಮ್ಮ ದೇಶದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿ ನೋಡಿಕೊಳ್ಳಿ. ಈ ವಿಚಾರದಲ್ಲಿ ನೀವು ನಾಚಿಕೆಪಟ್ಟುಕೊಳ್ಳಬೇಕು. ಭಾರತದಲ್ಲಿ ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣಲಾಗುತ್ತಿದೆ. ಮೊದಲು ಪಾಕ್ ವಿದೇಶಾಂಗ ಇಲಾಖೆ ಅವರ ಸಂವಿಧಾನವನ್ನು ಸರಿಯಾಗಿ ಓದಿಕೊಂಡು ವ್ಯತ್ಯಾಸ ತಿಳಿದುಕೊಳ್ಳಲಿ ಎಂದು ಭಾರತದ ರಕ್ಷಣಾ ಇಲಾಖೆ ವಕ್ತಾರರು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ