Publish Date: Sat, 20 Jul 2019 (08:08 IST)
Updated Date: Sat, 20 Jul 2019 (08:11 IST)
ಬೆಂಗಳೂರು : ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರುಮೂತ್ರ ಮಲ ಮೂತ್ರ ಮಾಡಲು ಹೋದಾಗ ನೋವು ಉರಿ ಉಂಟಾಗುತ್ತದೆ. ಇದರಿಂದ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಈ ನೋವು ಉರಿ ನಿವಾರಿಸಲು ಹೀಗೆ ಮಾಡಿ.
ಪ್ರತಿದಿನ ಕ್ಯಾರೆಟ್ ಅಥವಾ ಬೀಟ್ ರೂಟ್ ಜ್ಯೂಸ್, ಕಿತ್ತಳೆ ಜ್ಯೂಸ್ ಇವೆಲ್ಲನ್ನು ಕುಡಿಯಿರಿ ಇದರಿಂದ ಉರಿಯನ್ನು ಕಡಿಮೆಯಾಗುತ್ತದೆ. ಹಾಗಲಕಾಯಿಯ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು, ಅದರ ಎಲೆಯನ್ನು ಹಿಂಡಿ ರಸ ತೆಗೆದು ಆ ರಸವನ್ನು ಊದಿದ ಭಾಗಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುವುದು.
ಹಾಗೇ ಮೂಲವ್ಯಾಧಿ ಸಮಸ್ಯೆ ಬೇಗ ವಾಸಿಯಾಗಲು ಬಾಳೆಹಣ್ಣನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿ, ಈ ನೀರನ್ನು ದಿನದಲ್ಲಿ ೩ ಬಾರಿ ಕೆಡಿಯಿರಿ, ಈ ರೀತಿ ಕುಡಿಯುವುದರಿಂದ ಮೂಲವ್ಯಾದಿ ಸಮಸ್ಯೆ ನೈಸರ್ಗಿಕವಾಗಿ ಕಡಿಮೆಯಾಗುವುದು. ಕರಿ ಬೇವಿನ ಎಲೆ ಮತ್ತು ಗೋಧಿ ಹೂಳನ್ನು ಹಾಕಿ ಕುದಿಸಿದ ನೀರು ಕುಡಿಯುವುದು ಮೂಲವ್ಯಾಧಿಗೆ ವಾಸಿಯಾಗುತ್ತದೆ. ಮುಲಂಗಿ ಮೂಲವ್ಯಾಧಿಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾದ ಆಹಾರವಾಗಿದೆ. ಕಾಲು ಗ್ಲಾಸ್ ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಪೈಲ್ಸ್ ಹೆಚ್ಚಾಗದಂತೆ ತಡೆಯಬಹುದು.