Select Your Language

Notifications

webdunia
webdunia
webdunia
webdunia

ಕಾಮಗಾರಿ ಹಿನ್ನಲೆ; ಈ 2 ದಿನ ಬೆಂಗಳೂರಿನಲ್ಲಿ ಪೂರೈಕೆಯಾಗಲ್ಲ ಕಾವೇರಿ ನೀರು

ಕಾಮಗಾರಿ ಹಿನ್ನಲೆ; ಈ 2 ದಿನ ಬೆಂಗಳೂರಿನಲ್ಲಿ ಪೂರೈಕೆಯಾಗಲ್ಲ ಕಾವೇರಿ ನೀರು
ಬೆಂಗಳೂರು , ಶುಕ್ರವಾರ, 19 ಜುಲೈ 2019 (11:19 IST)
ಬೆಂಗಳೂರು : ಬೆಂಗಳೂರಿನ ನಿವಾಸಿಗಳಿಗೆ ಒಂದು ವಿಶೇಷ ಸೂಚನೆ. ಬೆಂಗಳೂರಿನಲ್ಲಿ ಜುಲೈ 21 ಹಾಗೂ 22 ರಂದು ಕಾವೇರಿ ನೀರು ಪೂರೈಕೆಯಾಗುವುದಿಲ್ಲ ಎಂಬುದಾಗಿ ತಿಳಿದುಬಂದಿದೆ.




ತೊರೆಕಾಡನಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯ ಪಂಪಿಂಗ್‌ ಕೇಂದ್ರಗಳಲ್ಲಿ ನೀರಿನ ಒತ್ತಡ ಕಡಿಮೆ ಮಾಡುವ ಕಾಮಗಾರಿ ಹಾಗೂ ವಿದ್ಯುತ್‌ ಗೆ ಸಂಬಂಧಿಸಿದ ಕೆಲಸಗಳು ನಡೆಯಲಿರುವ ಕಾರಣ ಎರಡು ದಿನ ಪಂಪಿಂಗ್‌ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.


ಈ ಹಿನ್ನಲೆಯಲ್ಲಿ  ಇಡೀ ನಗರಕ್ಕೆ ನೀರು ಪೂರೈಕೆ ಬಂದ್ ಆಗಲಿದೆ. ಆದಕಾರಣ ನಾಗರೀಕರು ಕಾವೇರಿ ನೀರನ್ನು ಈ ಮೊದಲೇ ಸಂಗ್ರಹಿಸಿಟ್ಟುಕೊಳ್ಳುವುದು ಸೂಕ್ತವೆನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಟ್ವೀಟರ್ ನಲ್ಲಿ ಸಿಎಂ ಹಾಗೂ ಸ್ಪೀಕರ್ ಕಾಲೆಳೆದ ಕೆ.ಎಸ್. ಈಶ್ವರಪ್ಪ