Webdunia - Bharat's app for daily news and videos

Install App

ಆರೋಗ್ಯಕ್ಕೆ ಉತ್ತಮವಾದ ನೀರನ್ನು ಈ ವೇಳೆ ಕುಡಿದರೆ ಆರೋಗ್ಯಕ್ಕೆ ಹಾನಿಯಾಗುವುದಂತೆ

Webdunia
ಮಂಗಳವಾರ, 24 ಜುಲೈ 2018 (09:49 IST)
ಬೆಂಗಳೂರು : ನೀರು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಕೆಲವು ಸಂದರ್ಭಗಳಲ್ಲಿ ನೀರು ಕುಡಿಯಬಾರದು. ಕುಡಿದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆ ಸಂದರ್ಭಗಳು ಯಾವುದು ಎಂಬುದು ಇಲ್ಲಿದೆ ನೋಡಿ.


*ಓಡಿ ಬಂದು ನೀರು ಕುಡೀಬೇಡಿ :
ಕೆಲವೊಮ್ಮೆ ಅತಿಯಾದ ದಾಹವನ್ನು ತಣಿಸಲು ಕೆಲವರು ಓಡಿ ಏದುಸಿರು ಬಿಡುತ್ತಿರುವಾಗಲೇ ಗುಟುಕು ನೀರು ಕುಡಿಯುತ್ತಾರೆ. ಇದರಿಂದ ಬಹಳ ಸಮಸ್ಯೆಯಾಗಬಹುದು. ಓಡಿ ಏದುಸಿರು ಬರುತ್ತಿರುವಾಗ, ಮೆಟ್ಟಿಲು ಹತ್ತಿಳಿಯುವ ಸಂದರ್ಭ ನೀರು ಕುಡಿಯಬೇಡಿ. ನಿಮ್ಮ ಏದುಸಿರು ತಹಬಂದಿಗೆ ಬಂದ ಬಳಿಕ ನೀರು ಕುಡಿಯಿರಿ.


*ದಾಹ ಇಂಗಿದ ಮೇಲೂ ನೀರು ಕುಡಿಯೋದು ಒಳ್ಳೆಯದಲ್ಲ :
ಬಾಯಾರಿಕೆ ನಿಂತ ಮೇಲೂ ಆರೋಗ್ಯದ ಕಾರಣಕ್ಕೆ ನೀರು ಕುಡಿಯುವವರು ಕೆಲವರಿದ್ದಾರೆ. ಇದರಿಂದ ದೇಹದಲ್ಲಿರುವ ಸಹಜ ಉಪ್ಪಿನಂಶ ದುರ್ಬಲವಾಗುತ್ತೆ. ದೇಹದಲ್ಲಿರುವ ಸೋಡಿಯಂ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿ ಹೈಪೊನೇಟ್ರೀಮಿಯಾಗೆ ತುತ್ತಾಗಬಹುದು. ಇದರಿಂದ ವಾಕರಿಕೆ, ವಾಂತಿ, ಆರೋಗ್ಯ ತೀರಾ ಹದಗೆಟ್ಟು ಸಾವೂ ಸಂಭವಿಸಬಹುದು. ಆದರೆ ಹೀಗಾಗುವುದು ಅತೀ ವಿರಳ.


*ಪಚನಕ್ರಿಯೆ ಸರಾಗವಿದ್ದೂ ಹೆಚ್ಚೆಚ್ಚು ನೀರು ಕುಡಿಯಬೇಡಿ :
ಮಲಬದ್ದತೆಯಂಥ ಸಮಸ್ಯೆಗಳಿಲ್ಲದೇ ಪಚನಕ್ರಿಯೆ ಸರಾಗವಾಗಿದ್ದರೆ ನೀವು ಸೇವಿಸುತ್ತಿರುವ ನೀರು ಸಾಕಾಗುವಷ್ಟಿದೆ ಅಂತರ್ಥ. ಆಮೇಲೂ ನೀರು ಕುಡಿಯೋದು ಬೇಡ. ಹಾಗೇ ಮೂತ್ರ ನೀರಿನಂತೆ ವರ್ಣರಹಿತವಾಗಿದ್ದರೆ ನೀವು ತೆಗೆದುಕೊಳ್ಳುತ್ತಿರುವ ನೀರನ್ನು ಇನ್ನು ಸ್ವಲ್ಪ ಕಡಿಮೆಮಾಡಬೇಕು. ನಸು ಹಳದಿ ಬಣ್ಣದಲ್ಲಿದ್ದರೆ ಸರಿಯಾಗಿದೆ ಅಂತರ್ಥ. ಹಳದಿ ಬಣ್ಣ ಹೆಚ್ಚಿದ್ದರೆ ನೀರಿನ ಸೇವನೆ ಹೆಚ್ಚು ಮಾಡಬೇಕು.


*ವರ್ಕೌಟ್ ಮಾಡಿದ ಕೂಡಲೇ ನೀರು ಬೇಡಿ :
ಹೆಚ್ಚಿನವರು ವರ್ಕೌಟ್ ಮಾಡುವ ಮಧ್ಯದಲ್ಲಿ ಅಥವಾ ವರ್ಕೌಟ್ ನಿಲ್ಲಿಸಿದ ಕೂಡಲೇ ನೀರು ಕುಡಿಯುತ್ತಾರೆ. ತಜ್ಞರ ಪ್ರಕಾರ ವರ್ಕೌಟ್ ಮುಗಿಸಿದ ಸ್ವಲ್ಪ ಹೊತ್ತಿನ ಬಳಿಕ ನೀರಿನ ಬದಲು ಎಳನೀರು ಕುಡಿಯೋದು ಒಳ್ಳೆಯದು. ವರ್ಕೌಟ್ ನಿಲ್ಲಿಸಿದ ಕೂಡಲೇ ನೀರು ಕುಡಿಯೋದು ಒಳ್ಳೆಯದಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 
 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments