ಆಯುರ್ವೇದದ ಪ್ರಕಾರ ಶುಗರ್ ಇದ್ದವರು ಗೋಧಿಯನ್ನು ಹೇಗೆ ಸೇವನೆ ಮಾಡಬೇಕು

Krishnaveni K
ಶನಿವಾರ, 7 ಡಿಸೆಂಬರ್ 2024 (10:47 IST)
Photo Credit: Facebook
ಬೆಂಗಳೂರು: ಸಾಮಾನ್ಯವಾಗಿ ಮಧುಮೇಹ ಅಥವಾ ಡಯಾಬಿಟಿಸ್ ಖಾಯಿಲೆ ಇದ್ದವರು ಅನ್ನ ಸೇವನೆ ಮಾಡುವುದಕ್ಕಿಂತ ಹೆಚ್ಚು ಗೋಧಿ ಸೇವನೆ ಮಾಡುವುದು ಉತ್ತಮ ಎಂದು ಅನೇಕರು ಹೇಳುತ್ತಾರೆ. ಆದರೆ ಗೋಧಿಯನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದು ಮುಖ್ಯ.

ಆಯುರ್ವೇದದ ಪ್ರಕಾರ ನಾವು ಅಂಗಡಿಯಿಂದ ತಂದ ಗೋಧಿಯನ್ನು ಹಾಗೆಯೇ ತಿಂಡಿ ಮಾಡಿ ಸೇವನೆ ಮಾಡುವುದರಿಂದ ಶುಗರ್ ಕಂಟ್ರೋಲ್ ಆಗಲ್ಲ. ಅದರ ಬದಲು ಗೋಧಿಯನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ಸೇವನೆ ಮಾಡಿದರೆ ಮಾತ್ರ ಮಧುಮೇಹಿಗಳಿಗೆ ಉತ್ತಮ. ಗೋಧಿಯನ್ನು ಮಧುಮೇಹಿಗಳು ಸೇವನೆ ಮಾಡಬೇಕೆಂದರೆ ಈ ವಿಧಾನವನ್ನು ಅನುಸರಿಸಬೇಕು.

ಗೋಧಿ ಕಾಳನ್ನು ಅಂಗಡಿಯಿಂದ ತಂದ ತಕ್ಷಣ ಚೆನ್ನಾಗಿ ತೊಳೆದುಕೊಂಡು ರಾತ್ರಿಯಿಡೀ ನೆನೆ ಹಾಕಬೇಕು
ಬಳಿಕ ಇದನ್ನು ಮರುದಿನ ಬಿಸಿಲಿಗೆ ಒಣ ಹಾಕಿ ಚೆನ್ನಾಗಿ ಒಣಗಲು ಬಿಡಬೇಕು
ಈ ಗೋಧಿಯನ್ನು ಪುಡಿ ಮಾಡಿಕೊಂಡು ಬಳಸಿದರೆ ಮಧುಮೇಹಿಗಳಿಗೂ ಗೋಧಿ ಸೇವನೆಗೆ ಯೋಗ್ಯವಾಗಿರುತ್ತದೆ.

ಗೋಧಿ ರೆಡಿಮೇಡ್ ಹಿಟ್ಟನ್ನು ಬಳಸುವ ಬದಲು ಇಡೀ ಗೋಧಿಯನ್ನು ತಂದು ತೊಳೆದು ಪುಡಿ ಮಾಡಿ ಬಳಸುವುದು ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ, ಸಾಮಾನ್ಯರಿಗೂ ಆರೋಗ್ಯಕರವಾಗಿರುತ್ತದೆ. ಗೋಧಿಯಲ್ಲೂ ಶುಗರ್ ಅಂಶ ಇದ್ದೇ ಇರುತ್ತದೆ. ಆದರೆ ಮೇಲೆ ಹೇಳಿದಂತೆ ಸಂಸ್ಕರಿಸಿ ಸೇವನೆ ಮಾಡುವುದರಿಂದ ಆ ಅಂಶವೂ ಹೋಗುತ್ತದೆ. ಇದು ಮಧುಮೇಹಿಗಳಿಗೆ ಆರೋಗ್ಯಕರವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ
Show comments