Select Your Language

Notifications

webdunia
webdunia
webdunia
webdunia

ಬೇಸಿಗೆಯ ಸೂರ್ಯನ ಬಿಸಿಯನ್ನು ತಡೆಯಲಾಗದವರು ಇದನ್ನು ಸೇವಿಸಿ

ಬೇಸಿಗೆಯ ಸೂರ್ಯನ ಬಿಸಿಯನ್ನು ತಡೆಯಲಾಗದವರು ಇದನ್ನು ಸೇವಿಸಿ
ಬೆಂಗಳೂರು , ಭಾನುವಾರ, 25 ಏಪ್ರಿಲ್ 2021 (06:55 IST)
ಬೆಂಗಳೂರು : ಬೇಸಿಗೆಯಲ್ಲಿ ಸೂರ್ಯ ಶಾಖ ಅತಿಯಾಗಿರುತ್ತದೆ. ಇದರಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಹೊರಗಡೆ ಹೋದಾಗ ಸೂರ್ಯನ ಶಾಖವನ್ನು ತಡೆಯಲು ಆಗುವುದಿಲ್ಲ. ನೀರಿನಾಂಶ ಕಡಿಮೆಯಾಗಿ ಜ್ವರ, ತಲೆಸುತ್ತು, ಅತಿಸಾರ, ಉಸಿರಾಟದ ಸಮಸ್ಯೆ ಕಾಡುತ್ತದೆ. ಹಾಗಾಗಿ ಅದಕ್ಕಾಗಿ ಇವುಗಳನ್ನು ಸೇವಿಸಿ.

*ಮಜ್ಜಿಗೆ ಅಥವಾ ಮೊಸರು : ಇವುಗಳಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಬೇಸಿಗೆಯ ಬೇಗೆ ತಣಿಸಲು ಕಪ್ಪು ಉಪ್ಪನ್ನು ಬೆರೆಸಿ ಸೇವಿಸಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

*ಈರುಳ್ಳಿ ರಸ : ಇದು ದೇಹದ ಉಷ್ಣಾಂಶವನ್ನು ಕಡಿಮೆಮಾಡುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ  ಈರುಳ್ಳಿ ರಸವನ್ನು ಕುಡಿಯಿರಿ.

*ಹೆಸರುಬೇಳೆ ಸೂಪ್ : ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ಶಾಖದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಸರು ಬೇಳೆಯನ್ನು ನೀರಿನಲ್ಲಿ ಕುದಿಸಿ ಉಪ್ಪು ಮತ್ತು ಪುದೀನ, ನಿಂಬೆ ರಸ ಸೇರಿಸಿ ಕುಡಿಯಿರಿ.

*ಹುಣಸೆ ರಸ : ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹುಣಸೆ ರಸಕ್ಕೆ ಬೆಲ್ಲ ಸೇರಿಸಿ ಕುಡಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರೆ ಬರದಿರಲು ಈ ಆರೋಗ್ಯ ಸಮಸ್ಯೆಗಳೇ ಕಾರಣ