Publish Date: Thu, 22 Feb 2024 (19:40 IST)
Updated Date: Thu, 22 Feb 2024 (19:45 IST)
ಬೆಂಗಳೂರು-ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದರೆ ಒತ್ತಡ ಅತಿಯಾದರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. ಉದ್ವಿಗ್ನತೆಗೆ ಒಳಗಾಗುತ್ತಾನೆ. ಇದು ಆತನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದ್ರಿಂದ ತಾನು ಸತ್ತೆ ಹೋದೆ ಎಂಬ ಆತಂಕಕ್ಕೂ ಮನುಷ್ಯ ಒಳಗಾಗುತ್ತಾನೆ . ಆದ್ರೆ ಇದರಿಂದ ಸಾವು ಬರುವುದಿಲ್ಲ .ಇದರಿಂದ ಹೊರಬರಲು ಪ್ರತಿಯೊಬ್ಬರೂ ಪ್ರಯತ್ನಪಾಡಬೇಕು.
ನಿಮ್ಮಗೆ ಯಾವ ಸಂಗತಿ ಹೆಚ್ಚು ಒತ್ತಡ ನೀಡುತ್ತದೆ ಎಂಬುದನ್ನ ನೀವೇ ಪತ್ತೆ ಮಾಡಬೇಕು ಒತ್ತಡಕ್ಕೆ ಒಳಗಾಗ್ತಿದೊಇರಿ ಎನ್ನುವ ಸಂದರ್ಭದಲ್ಲಿ ಉಲ್ಟಾ ಎಣಿಕೆ ಶುರುಮಾಡಿ.ಆಗ ನಿಮ್ಮ ಗಮನ ವಿಷ್ಯದ ಬದಲು ಅಂಕಿ ಮೇಲೆ ಹೋಗುತ್ತದೆ. ಮನಸ್ಸು ನಿಧಾನವಾಗಿ ಶಾಂತವಾಗುತ್ತದೆ.