Select Your Language

Notifications

webdunia
webdunia
webdunia
webdunia

ನಿದ್ರಾಹೀನತೆಯಿಂದ ಪಾರಾಗಲು ಇಲ್ಲಿದೆ ಸರಳ ಉಪಾಯ

ನಿದ್ರಾಹೀನತೆಯಿಂದ ಪಾರಾಗಲು ಇಲ್ಲಿದೆ ಸರಳ ಉಪಾಯ
bangalore , ಗುರುವಾರ, 28 ಡಿಸೆಂಬರ್ 2023 (09:49 IST)
ಪ್ರತಿದಿನದ ಡೈಯಟ್‌ನಲ್ಲಿ ಬೆಳ್ಳುಳ್ಳಿಯನ್ನು ಸೇರ್ಪಡೆಗೊಳಿಸಿದಲ್ಲಿ ಅತ್ಯುತ್ತಮ ಆರೋಗ್ಯ ನಿಮ್ಮದಾಗುತ್ತದೆ. ಒಂದೇ ಒಂದು ಬೆಳ್ಳುಳ್ಳಿ ತುಣುಕು ನಿಮ್ಮ ದಿಂಬಿನ ಕೆಳಗಿಟ್ಟು ಮಲಗಿದಲ್ಲಿ ನಿದ್ರಾಹೀನತೆ ದೂರವಾಗುತ್ತದೆ.
 
ಒಂದೇ ಒಂದು ಬೆಳ್ಳುಳ್ಳಿ ತುಣುಕು ಆರೋಗ್ಯದ ಮೇಲೆ ಎಂತಹ ಅಚ್ಚರಿ ಫಲಿತಾಂಶಗಳನ್ನು ತರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಬೆಳ್ಳುಳ್ಳಿ ನಮ್ಮ ದೇಹಕ್ಕೆ ಅತಿ ಪ್ರಯೋಜನಾಕಾರಿ. ಕರುಳಿನ ರೋಗದಿಂದ ಹಿಡಿದು ರಕ್ತವನ್ನು ಶುದ್ದಿಕರಿಸುವವರೆಗೆ ಕಾರ್ಯನಿರ್ವಹಿಸುತ್ತದೆ.  
 
ನಿದ್ರಾಹೀನತೆ ನಿಮ್ಮನ್ನು ಕಾಡುತ್ತಿದೆಯೇ?
 
ನಿದ್ರೆ ಮಾತ್ರೆಗಳು ತೆಗೆದುಕೊಂಡರೂ ನಿದ್ರೆ ಬರುತ್ತಿಲ್ಲವೇ?ನಿದ್ರೆ ಮಾತ್ರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ?ಇಂತಹ ನಿದ್ರಾಹೀನತೆಯನ್ನು ಹೇಗೆ ಪಾರಾಗಬೇಕು ಎಂದು ಯೋಚಿಸುತ್ತಿದ್ದೀರಾ?
 
ಇದಕ್ಕೆ ಅತ್ಯುತ್ತಮ ಉತ್ತರ ಬೆಳ್ಳುಳ್ಳಿ. ಒಂದೇ ಒಂದು ಬೆಳ್ಳುಳ್ಳಿ ತುಣಕನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಿ. ನಿಮ್ಮ ನಿದ್ರಾಹೀನತೆಯ ಕ್ಷಣಾರ್ಧದಲ್ಲಿಯೇ ಓಡಿಸುವದು ನೋಡಿ ಅಚ್ಚರಿ ಪಡುತ್ತೀರಿ.
 
ಬೆಳ್ಳುಳ್ಳಿಯಲ್ಲಿರುವ ಔಷಧಿಯ ಗುಣಗಳು ನಿಮಗೆ ಕಾಡುತ್ತಿರುವ ನಿದ್ರಾಹೀನತೆ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ. ಗೊತ್ತಾಯಿತಾ, ಇದೀಗ ನೆಮ್ಮದಿಯಿಂದ ಹಾಯಾಗಿ ನಿದ್ರೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ತೂಕ ಇಳಿಸಿಕೊಳ್ಳಲು ಕೆಲವು ಟಿಪ್ಸ್‌ಗಳನ್ನು ಫಾಲೋ ಮಾಡಿ