Webdunia - Bharat's app for daily news and videos

Install App

ಮೆದುಳು ತಿನ್ನುವ ಅಮೀಬಿಯಾ ಕಾಯಿಲೆಯ ಲಕ್ಷಣಗಳು ಹೀಗಿರುತ್ತವೆ

Krishnaveni K
ಮಂಗಳವಾರ, 9 ಜುಲೈ 2024 (09:15 IST)
ಬೆಂಗಳೂರು: ಕೇರಳದಲ್ಲಿ ಕಂಡುಬಂದಿರುವ ಮೆದುಳು ತಿನ್ನುವ ಅಮೀಬಿಯಾ ಕಾಯಿಲೆ ಈಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲೂ ಈ ರೋಗದ ಭೀತಿ ಮನೆ ಮಾಡಿದೆ. ಇದರ ಲಕ್ಷಣಗಳೇನು ತಿಳಿದುಕೊಳ್ಳಿ.

ಈ ರೋಗ ಬಂದರೆ ಸಾವೇ ಗತಿ ಎನ್ನುವ ಆತಂಕ ಜನರಿಗೆ ಶುರುವಾಗಿದೆ. ಈಗಾಗಲೇ ಕೇರಳದಲ್ಲಿ ಈ ಕಾಯಿಲೆಗೆ ತುತ್ತಾದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಹೀಗಾಗಿ ಈ ಸೋಂಕು ರೋಗದ ಬಗ್ಗೆ ಜನರಲ್ಲಿ ಭೀತಿ ಮನೆ ಮಾಡಿದೆ. ಹೀಗಾಗಿ ಇದರ ರೋಗ ಲಕ್ಷಣ ತಿಳಿಯುವುದು ಅಗತ್ಯವಾಗಿದೆ.

ಮೆದುಳನ್ನು ತಿನ್ನುವ ವಿಚಿತ್ರ ಏಕಾಣು ಜೀವಿಯು ಮನುಷ್ಯನ ಜೀವಕ್ಕೇ ಅಪಾಯ ತಂದೊಡ್ಡಬಲ್ಲದು. ಈ ರೋಗ ಆರಂಭದಲ್ಲಿ ಸಾಮಾನ್ಯ ಜ್ವರದಂತೆ ಅನಿಸಿದರೂ ಬಳಿಕ ಹಂತ ಹಂತವಾಗಿ ಮನುಷ್ಯ ಸಾವಿನ ದವಡೆಗೆ ತಲುಪುತ್ತಾನೆ. ನೆಗ್ಲೆರಿಯಾ ಫಾವ್ಲೆರಿ ಎಂಬ ನದ ಅಥವಾ ಕೆರೆಗಳಲ್ಲಿ ಕಂಡುಬರುವ ಅಮೀಬಿಯಾದಿಂದ ಈ ರೋಗ ಬರುತ್ತದೆ. ನದಿ ಅಥವಾ ಕೆರೆಯಲ್ಲಿ ಈಜಾಡುವಾಗ ಅಥವಾ ನೀರು ಕುಡಿದಾಗ ಮೂಗಿನ ಮೂಲಕ ಮೆದುಳು ಪ್ರವೇಶಿಸಿ ಮೆದುಳಿನ ಜೀವಕೋಶಗಳಿಗೆ ಹಾನಿ ಉಂಟುಮಾಡುತ್ತದೆ. ಕ್ರಮೇಣ ಮೆದುಳಿನ ಜೀವಕೋಶಗಳು ಊದಿಕೊಂಡು ವ್ಯಕ್ತಿ ಜೀವ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಾನೆ.

ಈ ಸೋಂಕಿಗೆ ತುತ್ತಾದವರಲ್ಲಿ ಮೊದಲು ತಲೆನೋವು ಕಾಣಿಸಿಕೊಳ್ಳುತ್ತದೆ. ಬಳಿಕ ಜ್ವರ, ವಾಂತಿ ಸೇರಿದಂತೆ ಸಾಮಾನ್ಯ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಮಾನಸಿಕ ಅಸ್ವಸ್ಥತೆ, ಗುರುತಿಸಲು ಕಷ್ಟವಾಗುವುದು ಇತ್ಯಾದಿ ಸಮಸ್ಯೆ ಬರಬಹುದು. ಈ ರೋಗಕ್ಕೆ ಇನ್ನೂ ಸೂಕ್ತ ಚಿಕಿತ್ಸೆ ಕಂಡುಕೊಳ್ಳಲಾಗಿಲ್ಲ. ಹೀಗಾಗಿ ಮಳೆಗಾಲದಲ್ಲಿ ಕೆರೆ, ನದಿಗಳಲ್ಲಿ ಈಜುವ ಅಭ್ಯಾಸವನ್ನು ಬಿಡುವುದು ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

ಮುಂದಿನ ಸುದ್ದಿ
Show comments