Webdunia - Bharat's app for daily news and videos

Install App

ದೇವಸ್ಥಾನದಲ್ಲಿ ಯುವಕರಿಗೆ ಕಣ್ಣು ಹೊಡೆದವಳು ಅದನ್ನು ಮಾಡೇ ಬಿಟ್ಟಳು!

Webdunia
ಮಂಗಳವಾರ, 2 ಜುಲೈ 2019 (14:40 IST)
ಪ್ರಶ್ನೆ: ನಾನು ಅವಿವಾಹಿತನಾಗಿದ್ದು, ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿರುವೆ. ಕಷ್ಟಪಟ್ಟು ದುಡಿದು ಸ್ವಾಭಿಮಾನದ ಜೀವನ ನಡೆಸುತ್ತಿರುವೆ. ನಾನು ನನ್ನ ಗೆಳೆಯನೊಂದಿಗೆ ನಿತ್ಯ ದೇವಸ್ಥಾನಕ್ಕೆ ಹೋಗುತ್ತೇನೆ. ಅಲ್ಲಿ ಒಬ್ಬಳು ಯುವತಿ ದಿನಾಲೂ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಒಂದು ದಿನ ಕಣ್ಣು ಹೊಡೆದಳು. ಆ ಬಳಿಕ ಸಿಮ್ ಕೇಳಿ ಪಡೆದುಕೊಂಡಳು.

ಹದಿನೈದಿಪ್ಪತ್ತು ದಿನ ನನ್ನೊಂದಿಗೆ ಫೋನ್ ನಲ್ಲಿ ಮಾತನಾಡಿದಳು. ಆ ಬಳಿಕ ಮನೆಯಲ್ಲಿ ತೊಂದರೆ ಇದೆ ಎಂದು ಹೇಳಿ 50 ಸಾವಿರ ಹಣ ಪಡೆದುಕೊಂಡಳು. ಇದಾದ ಬಳಿಕ ಸ್ಟಾಂಪ್ ಪೇಪರ್ ವೊಂದನ್ನು ಕಳಿಸಿ ಸಹಿ ಮಾಡು ಎಂದು ಒತ್ತಾಯ ಮಾಡಿದಳು. ಆದರೆ ನಾನು, ನನ್ನ ಗೆಳೆಯ ಸಹಿ ಮಾಡಲಿಲ್ಲ. ಹೀಗಾಗಿ ಸಿಮ್ ಕಿತ್ತು ಬಿಸಾಕಿದಳು. ನನಗೆ ಹೆಣ್ಣು ಸಿಗಲಿಲ್ಲ. ನಾನು ಕೊಟ್ಟ ಹಣವೂ ಸಿಗಲಿಲ್ಲ. ಅವಳ ವಿಳಾಸ, ಮನೆ, ಏನೊಂದು ಗೊತ್ತಿಲ್ಲ. ಪರಿಹಾರ ತಿಳಿಸಿ.

ಉತ್ತರ: ಹೋಟೆಲ್ ನಲ್ಲಿ ಕಷ್ಟುಪಟ್ಟು ದುಡಿದ ನಿಮ್ಮ ಹಣವನ್ನು ಯಾವೊಂದು ಗುರ್ತು, ಪರಿಚಯವಿಲ್ಲದ ಯುವತಿಗೆ ನೀಡಿರುವುದೇ ನಿಮ್ಮ ಮೊದಲ ತಪ್ಪು. ಅಪರಿಚಿತರಿಗೆ ಸಿಮ್ ಕೊಡಿಸಿರುವುದು ಸರಿಯಲ್ಲ.

ನಿಜವಾದ ಪ್ರೀತಿಯ ಮನಸ್ಸನ್ನು ನೋಡಿ ಬರುತ್ತದೆಯೇ ಹೊರತು ದುಡ್ಡನ್ನಲ್ಲ. ಆ ಯುವತಿ ನಿಮ್ಮನ್ನು ಯಾಮಾರಿಸಿ, ಮೋಸ ಮಾಡೋಕೆ ಮೊದಲೇ ಪ್ಲಾನ್ ಸಿದ್ಧಪಡಿಸಿಕೊಂಡಿದ್ದಳು ಎನಿಸುತ್ತದೆ. ಇನ್ನೆಂದೂ ಹುಡುಗಿಯರ ಹಿಂದೆ ಹೋಗಿ ಹೀಗೆ ಮೂರ್ಖತನಮಾಡಿಕೊಳ್ಳಬೇಡಿ. ನಿಮ್ಮ ಹಣ ವಾಪಸ್ ಬೇಕಾದಲ್ಲಿ ಪೊಲೀಸ್ ಠಾಣೆ ಅಥವಾ ನ್ಯಾಯವಾದಿಗಳ ಸಲಹೆ ಪಡೆದುಕೊಳ್ಳಿರಿ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ
Show comments