Select Your Language

Notifications

webdunia
webdunia
webdunia
webdunia

ನಿಖಿಲ್ ಪರ ಪ್ರಚಾರ ಮಾಡದಿರುವುದಕ್ಕೆ ಹೆಚ್.ಡಿ.ಕೆ ಕಾರಣ ಎಂದ ಕಾಂಗ್ರೆಸ್ ನ ಮಾಜಿ ಶಾಸಕ

ನಿಖಿಲ್ ಪರ ಪ್ರಚಾರ ಮಾಡದಿರುವುದಕ್ಕೆ ಹೆಚ್.ಡಿ.ಕೆ ಕಾರಣ ಎಂದ ಕಾಂಗ್ರೆಸ್ ನ ಮಾಜಿ ಶಾಸಕ
ಮಂಡ್ಯ , ಮಂಗಳವಾರ, 14 ಮೇ 2019 (10:31 IST)
ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ತಟಸ್ಥವಾಗಿರಲು ಹೆಚ್.ಡಿ.ಕುಮಾರಸ್ವಾಮಿ ಅವರೇ ಕಾರಣ ಎಂದು ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಆರೋಪಿಸಿದ್ದಾರೆ.





ನಿಖಿಲ್ ಪರ ಪ್ರಚಾರ ಮಾಡದಿರುವುದಕ್ಕೆ  ಹೆಚ್.ಡಿ.ಕುಮಾರಸ್ವಾಮಿ ಕಾರಣ. ನೂರಕ್ಕೆ ನೂರರಷ್ಟು ಅವರೇ ಹೊಣೆ. ಚುನಾವಣೆ ವೇಳೆ ನಮ್ಮನ್ನು ಪ್ರೀತಿ,ಗೌರವದಿಂದ ಕಾಣಲಿಲ್ಲ. ನಿಖಿಲ್ ಹಾಗೂ ಸಿಎಂ ಕುಮಾರಸ್ವಾಮಿ ನಮ್ಮನ್ನ ಆಹ್ವಾನಿಸಬೇಕಿತ್ತು. ಅವರು ನಮ್ಮನ್ನ ಕರೆದಿದ್ದರೆ ನಾವು ಪ್ರಚಾರ ಮಾಡಿ 5-6 ಲಕ್ಷ ಮತಗಳ ಅಂತರದಿಂದ ನಿಖಿಲ್ ರನ್ನ ಗೆಲ್ಲಿಸ್ತಿದ್ದೇವು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ.


ಎಲ್.ಆರ್.ಶಿವರಾಮೇಗೌಡ ಸ್ಪರ್ಧಿಸಿದಾಗ ನಮ್ಮನ್ನು ಕೇಳಿದ್ದರು. ಆಗ ಭಾರೀ ಅಂತರದಿಂದ ಅವರನ್ನು ಗೆಲ್ಲಿಸಿದ್ದೆವು. ಸ್ವಾಭಿಮಾನ ಪ್ರತಿಯೊಬ್ಬರಿಗೂ ಇರುತ್ತದೆ.  ಸ್ವಾಭಿಮಾನ ಬಿಟ್ಟು ಯಾರೂ ಕೆಲಸ ಮಾಡಲ್ಲ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕ ಜೀವನಕ್ಕೆ ಮಾಯಾವತಿ ಲಾಯಕ್ಕಲ್ಲ: ಅರುಣ್ ಜೇಟ್ಲಿ ವಾಗ್ದಾಳಿ