Publish Date: Wed, 03 Apr 2019 (15:01 IST)
Updated Date: Wed, 03 Apr 2019 (15:03 IST)
ಬಿಜೆಪಿಯವರು ಸಣ್ಣಪುಟ್ಟದನ್ನು ಮಾಡಿ, ನಾವು ಮಾಡಿದ್ದೇವೆ ಎದು ಹಿರೋ ಆಗಲು ಪೋಜ್ ಕೊಡುತ್ತಿದ್ದಾರೆ. ಹೀಗಂತ ಸಂಸದರೊಬ್ಬರು ದೂರಿದ್ದಾರೆ.
ರಾಯಚೂರ ಸಂಸದ ಬಿ.ವಿ.ನಾಯಕ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ವ್ಯಾಪ್ತಿಯ ಪರಸನಹಳ್ಳಿಯಲ್ಲಿ ಪ್ರಚಾರ ನಡೆಸಿದ್ರು. ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಬಿಜೆಪಿ ನಾಯಕರು ಕಾಂಗ್ರೆಸ್ ನವರು ಏನು ಅಭಿವೃದ್ಧಿ ಮಾಡಿದ್ದಾರೆಂದು ಕೇಳುತ್ತಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ. ನಾವು ಮಾಡಿದ್ದು ಹೇಳಲು ಟೈಮ್ ಇಲ್ಲ. ಅಷ್ಟೊಂದು ಹೆಚ್ಚಿಗೆ ಕೆಲಸ ಕಾಂಗ್ರೆಸ್ ಸರಕಾರ ಮಾಡಿದೆ. ಆದರೆ ಬಿಜೆಪಿಯವರು ಪೋಜ್ ಕೊಡುತ್ತಿದ್ದಾರೆ ಅಂತ ಸಂಸದ ಬಿ.ವಿ.ನಾಯಕ ಹೇಳಿಕೆ ನೀಡಿದ್ದಾರೆ.