Select Your Language

Notifications

webdunia
webdunia
webdunia
Friday, 11 April 2025
webdunia

ಬಿಜೆಪಿ ನಾಯಕರ ದ್ವೇಷದಿಂದಲೇ ರಾಜೀವ್ ಗಾಂಧಿ ಹತ್ಯೆ ನಡೆಯಿತು- ಅಹಮದ್ ಪಟೇಲ್ ಆರೋಪ

ನವದೆಹಲಿ
ನವದೆಹಲಿ , ಗುರುವಾರ, 9 ಮೇ 2019 (11:36 IST)
ನವದೆಹಲಿ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಈಗ ಅವರನ್ನು ಅವಮಾನಿಸುತ್ತಿರುವ ಬಿಜೆಪಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಗಂಭೀರ ಆರೋಪ ಮಾಡಿದ್ದಾರೆ.




ಈ ಬಗ್ಗೆ ಟ್ವೀಟ್ ಮಾಡಿರುವ ಅಹಮದ್ ಪಟೇಲ್, ಹುತಾತ್ಮರಾಗಿರುವ ಪ್ರಧಾನ ಮಂತ್ರಿ ಅವಮಾನಿಸುವುದು ಹೇಡಿತನದ ಸಂಕೇತ. ಅಷ್ಟಕ್ಕೂ ಅವರ ಹತ್ಯೆಗೆ ಕಾರಣ ಯಾರು? ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಅವರಿಗೆ ಹೆಚ್ಚುವರಿ ಭದ್ರತೆ ನೀಡಲು ನಿರಾಕರಿಸಿತ್ತು. ಬಿಜೆಪಿ ನಾಯಕರ ದ್ವೇಷದಿಂದಲೇ ರಾಜೀವ್ ಗಾಂಧಿ ಹತ್ಯೆ ನಡೆಯಿತು ಎಂದು ಆರೋಪಿಸಿದ್ದಾರೆ.


ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಗುಪ್ತಚರ ವರದಿಗಳು ಕೇಂದ್ರ ಸರ್ಕಾರದ ಬಳಿ ಇದ್ದರೂ ಭದ್ರತೆಯನ್ನು ಹೆಚ್ಚಿಸಿರಲಿಲ್ಲ. ಇದರಿಂದಲೇ ಅವರ ಹತ್ಯೆ ನಡೆಯಿತು. ಈಗ ಅವರ ವಿರುದ್ಧ ನೀವು ಮಾಡುತ್ತಿರುವ ಆಧಾರ ರಹಿತ ಆರೋಪಗಳಿಗೆ ಉತ್ತರಿಸಲು ಅವರು ನಮ್ಮೊಂದಿಗೆ ಇಲ್ಲ ಎಂದು ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದುರ್ಯೋಧನ ಟೀಕೆಗೆ ಮೌನವೇ ಉತ್ತರ ಎಂದ ಪ್ರಧಾನಿ ಮೋದಿ