Publish Date: Tue, 07 May 2019 (07:24 IST)
Updated Date: Tue, 07 May 2019 (07:50 IST)
ನವದೆಹಲಿ : ಆಮ್ ಆದ್ಮಿ ಪಕ್ಷದ ಶಾಸಕ ಅನಿಲ್ ವಾಜಪೇಯಿ ಅವರು ಇತ್ತೀಚೆಗಷ್ಟೇ ಪಕ್ಕಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅದರ ಬೆನ್ನಲ್ಲೇ ಇದೀಗ ಎಎಪಿ ಪಕ್ಷದ ಮತ್ತೊಬ್ಬ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಎಎಪಿ ಪಕ್ಷದ ರೆಬಲ್ ಶಾಸಕ ದೇವಿಂದ್ರ ಕುಮಾರ್ ಸೆಹ್ರಾವತ್ ಅವರು ಬಿಜೆಪಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಿವೃತ್ತ ಕರ್ನಲ್ ಅಧಿಕಾರಿಯಾಗಿದ್ದ ಇವರು 2015 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜ್ವಾಸನ್ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. ಆದರೆ ಪಕ್ಷ ವಿರೋಧ ಚಟುವಟಿಕೆಯಿಂದಾಗಿ ಅವರನ್ನು 2016 ರಲ್ಲಿ ಪಕ್ಷದಿಂದ ಅಮಾನತುಗೊಂಡಿದ್ದರು.
ಆದರೆ ಇದೀಗ ಅವರು ಕೇಂದ್ರ ಸಚಿವ ವಿಜಯ್ ಗೋಗಲ್ ಅವರ ನೇತೃತ್ವದಲ್ಲಿ ಸೋಮವಾರ ಸೇರ್ಪಡೆಯಾಗುವುದರ ಮೂಲಕ ಎಎಪಿ ಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.