Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ ನಟ ಜಗ್ಗೇಶ್

ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ ನಟ ಜಗ್ಗೇಶ್
ಬೆಂಗಳೂರು , ಗುರುವಾರ, 11 ಏಪ್ರಿಲ್ 2019 (15:02 IST)
ನಾನು ಎಂದೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಜನಸಾಮಾನ್ಯರ ಪರವಾಗಿ ಕೆಲಸ ಮಾಡಿದವನು. ಮತ್ತೊಮ್ಮೆ ನಿಮ್ಮ ಸೇವೆಗೆ ಅವಕಾಶಕೊಡಿ. ಹೀಗಂತ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ‌ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಚಿತ್ರನಟ ಜಗ್ಗೇಶ್ ಪ್ರಚಾರ ನಡೆಸಿದ್ರು. ರಾಜಗೋಪಾಲನಗರದಲ್ಲಿ ಸದಾನಂದಗೌಡರಿಗೆ ದೃಷ್ಟಿ ತೆಗೆದು‌ ಕುಂಬಳಕಾಯಿ ಒಡೆದ ಮಹಿಳಾ ಕಾರ್ಯಕರ್ತರು ಜೈಕಾರ ಕೂಗಿದ್ರು.

ನಾನು ಎಂದೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಜನಸಾಮಾನ್ಯರ ಪರವಾಗಿ ಕೆಲಸ ಮಾಡಿದವನು. ಮತ್ತೊಮ್ಮೆ ನಿಮ್ಮ ಸೇವೆಗೆ ಅವಕಾಶಕೊಡಿ ಎಂದು ಮನವಿ ಮಾಡಿದರು ಸದಾನಂದಗೌಡ.

ಗೆದ್ರೆ ಕೆಲಸ ಮಾಡ್ತೇನೆ. ಸೋತರೆ ಗೆದ್ದವನ ಬಳಿ ಕೆಲಸ ಮಾಡಿಸುತ್ತೇನೆ. ನಾನು 5 ವರ್ಷಕ್ಕೆ ಬಂದಿಲ್ಲ, ಬದಲಾಗಿ ಮುಂದಿನ ದಿನಗಳಿಗಾಗಿ ಬಂದಿದ್ದೇನೆ ಎಂದರು.

ಈ ದೇಶಕ್ಕೆ ಒಬ್ಬ ಚೌಕಿದಾರ ನರೇಂದ್ರ ಮೋದಿ. ನಮ್ಮ ರಕ್ಷಣೆಗೆ ಚೌಕಿದಾರ ಬೇಕೋ ಅಥವಾ ನಮ್ಮ ಆಸ್ತಿಪಾಸ್ತಿಯನ್ನೆಲ್ಲಾ ಕಳ್ಳತನ ಮಾಡಿಕೊಂಡು ಹೋಗುವವರು ಬೇಕೋ ನಿರ್ಧರಿಸಿ ಎಂದು ನಟ ಜಗ್ಗೇಶ್ ಕಾಂಗ್ರೆಸ್ ಪರೋಕ್ಷವಾಗಿ ಜರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಸಿಎಂ ಬಿರುಸಿನ ಪ್ರಚಾರ; ದರ್ಶನ್ ಕ್ಯಾಂಪೇಜ್ ಜೋರು