Select Your Language

Notifications

webdunia
webdunia
webdunia
webdunia

ಗೌಡರ ಕುಟುಂಬ ರಾಜಕಾರಣದ ಕುರಿತು ವ್ಯಂಗ್ಯವಾಡಿದ ಮಧ್ಯಪ್ರದೇಶ ಮಾಜಿ ಸಿಎಂ

ಗೌಡರ ಕುಟುಂಬ ರಾಜಕಾರಣದ ಕುರಿತು ವ್ಯಂಗ್ಯವಾಡಿದ ಮಧ್ಯಪ್ರದೇಶ ಮಾಜಿ ಸಿಎಂ
ಮಧ್ಯಪ್ರದೇಶ , ಬುಧವಾರ, 10 ಏಪ್ರಿಲ್ 2019 (09:35 IST)
ಮಧ್ಯಪ್ರದೇಶ : ಹೆಚ್.ಡಿ.ದೇವೇಗೌಡರ ತಮ್ಮ ಪತ್ನಿಯನ್ನು ನಿಲ್ಲಿಸಬೇಕಿತ್ತು ಎಂದು ಹೇಳುವುದರ ಮೂಲಕ  ಗೌಡರ ಕುಟುಂಬ ರಾಜಕರಣದ ಕುರಿತು ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವ್ಯಂಗ್ಯವಾಡಿದ್ದಾರೆ.


ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ದೇವೇಗೌಡರ ಮಗ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಮತ್ತೊಬ್ಬ ಮಗ ಸಚಿವ, ಸೊಸೆ ಪಂಚಾಯಿತಿ ಸೊತೆ, ಈಗ ಮೊಮ್ಮಕ್ಕಳಾದ ನಿಖಿಲ್,ಪ್ರಜ್ವಲ್ ಅವರನ್ನೂ ಲೋಕಸಭೆ ಕಣಕ್ಕಿಳಿದಿದ್ದಾರೆ, ಈಗ ಉಳಿದಿದ್ದು, ದೇವೇಗೌಡರ ಪತ್ನಿಯೊಬ್ಬರೇ, ಅವರಿಗೂ ಟಿಕೆಟ್ ನೀಡಿ, ಚುನಾವಣೆಗೆ ನಿಲ್ಲಿಸಿದರೆ ಕೋಟಾ ಭರ್ತಿಯಾಗುತ್ತಿತ್ತು ಎಂದು ಲೇವಡಿ ಮಾಡಿದ್ದಾರೆ.


ಹೆಚ್.ಡಿ. ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗುವ ಕನಸು ಇಟ್ಟುಕೊಂಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರೇ ಇಲ್ಲ. ಎಲ್ಲಾ ದೇವೇಗೌಡರ ಕುಟುಂಬಸ್ಥರೇ ತುಂಬಿಕೊಂಡಿದ್ದಾರೆ ಎಂದು ಅವರು ವ್ಯಂವ್ಯ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಖಾತೆ ಹೊಂದಿರದಿದ್ದರೂ ಈ ಬ್ಯಾಂಕ್ ನಲ್ಲಿ ಸಿಗುತ್ತೆ ಎಟಿಎಂ ಕಾರ್ಡ್