Select Your Language

Notifications

webdunia
webdunia
webdunia
webdunia

ಸೋಲಿಗೆ ಉತ್ತರ ಕೊಡ್ತಾರಾ ಬಂಗಾರಪ್ಪ?

ಸೋಲಿಗೆ ಉತ್ತರ ಕೊಡ್ತಾರಾ ಬಂಗಾರಪ್ಪ?
ಶಿವಮೊಗ್ಗ , ಬುಧವಾರ, 3 ಏಪ್ರಿಲ್ 2019 (14:29 IST)
ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಶಿವಮೊಗ್ಗದಲ್ಲಿ ಇಂದು ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಲಿದ್ದಾರೆ. ಆ ಮೂಲಕ ಚುನಾವಣೆ ಕದನ ಕಹಳೆ ಮೊಳಗಿಸಲಿದ್ದಾರೆ.

ರಾಜ್ಯ ನಾಯಕರ ಪ್ರತಿಷ್ಠೆಯ ರಣರಂಗವಾಗಿ ಮಾರ್ಪಾಡುಗೊಳ್ಳುತ್ತಿರುವ ಲೋಕಸಭಾ ಕ್ಷೇತ್ರ ಎಂದರೆ‌ ಅದು ಬೇರೆ ಯಾವುದೂ ಅಲ್ಲ, ಅದುವೇ ಶಿವಮೊಗ್ಗ. ಇಲ್ಲಿ ಈಗಾಗಲೇ ಬಿಜೆಪಿ ಯಿಂದ ಬಿ.ಎಸ್. ಯಡಿಯೂರಪ್ಪರ ಪುತ್ರ  ರಾಘವೇಂದ್ರ ನಾಮಪತ್ರ ಸಲ್ಲಿಸಿ ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರ  ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿದ್ದಾರೆ.
ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿರುವ ಮಧು ಬಂಗಾರಪ್ಪ ಹಳೆ ಸೋಲಿಗೆ ಹೊಸ ಉತ್ತರ ಕೊಡಲು ರೆಡಿಯಾಗುತ್ತಿದ್ದಾರೆ. ಶಿವಮೊಗ್ಗ ಲೋಕ ರಣರಂಗದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಮಧುಬಂಗಾರಪ್ಪ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಅದಕ್ಕೂ ಮೊದಲು ನಗರದ ರಾಮಣಶೆಟ್ಟಿ ಪಾರ್ಕ್ ನಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಈ ಮೆರವಣಿಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಟ್ರಬಲ್ ಶೂಟರ್ ಖ್ಯಾತಿಯ ಸಚಿವ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಉಮೇಶ್ ಜಾಧವ್ ಟೆಂಪಲ್ ರನ್ : ನಾಮಪತ್ರ ಸಲ್ಲಿಕೆ