Publish Date: Wed, 03 Apr 2019 (14:26 IST)
Updated Date: Wed, 03 Apr 2019 (14:28 IST)
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಮೊದಲು ಟೆಂಪಲ್ ರನ್ ಗೆ ಅಭ್ಯರ್ಥಿಗಳು ಆದ್ಯತೆ ನೀಡುತ್ತಿದ್ದಾರೆ.
ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವರ್ ಇಂದು ನಾಮಪತ್ರ ಸಲ್ಲಿಕೆ ಮಾಡುವ ಹಿನ್ನೆಲೆಯಲ್ಲಿ ಟೆಂಪಲ್ ರನ್ ಮಾಡಿದ್ರು.
ಜಾಧವ್ ರಿಂದ ಮುಂದುವರಿದ ಟೆಂಪಲ್ ರನ್ ಗೆ ಕಾರ್ಯಕರ್ತರು ಸಾಥ್ ನೀಡಿದ್ರು. ಕಲಬುರ್ಗಿಯ ಪ್ರಸಿದ್ಧ ಶ್ರೀ ಶರಣಬಸವೇಶ್ವರ ಟೆಂಪಲ್ ಗೆ ಭೇಟಿ ನೀಡಿದ ಜಾಧವ್ ಗೆ ಅವರ ಧರ್ಮಪತ್ನಿ ಗಾಯತ್ರಿ ಜಾಧವ್ ಜತೆಗಿದ್ದರು.
ಶರಣಬಸಪ್ಪ ಅಪ್ಪ ಪೀಠಾಧಿಪತಿ ಅವರಿಂದ ಆಶೀರ್ವಾದ ಪಡೆದ ಜಾಧವ್, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ರು.