Select Your Language

Notifications

webdunia
webdunia
webdunia
webdunia

ಸರಿಗಮಪ ಗಾಯಕ ಹನುಮಂತಣ್ಣನ ಹೊಸ ಅವತಾರ

ಸರಿಗಮಪ ಗಾಯಕ ಹನುಮಂತಣ್ಣನ ಹೊಸ ಅವತಾರ
ಬೆಂಗಳೂರು , ಬುಧವಾರ, 3 ಏಪ್ರಿಲ್ 2019 (09:40 IST)
ಬೆಂಗಳೂರು: ಜೀ ಕನ್ನಡ ಸರಿಗಮಪ ಸ್ಪರ್ಧೆ ಮುಖಾಂತರ ರಾಜ್ಯಾದ್ಯಂತ ಮನೆ ಮಾತಾದ ಹಳ್ಳಿ ಹೈದ ಹನುಮಂತಪ್ಪ ಈಗ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.


ಹನುಮಂತಪ್ಪ ಮಾತ್ರವಲ್ಲದೆ, ಬಿಗ್ ಬಾಸ್ 5 ವಿನ್ನರ್ ರ್ಯಾಪರ್ ಚಂದನ್ ಶೆಟ್ಟಿ, ಗಾಯಕಿ ಸವಿತಕ್ಕ,  ಅರ್ಚನಾ ಉಡುಪ ಮುಂತಾದವರೂ ಚುನಾವಣಾ ಆಯೋಗದ ಪರವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ.

ಹನುಮಂತಪ್ಪ ವಿಶೇಷವಾಗಿ ಹಾವೇರಿ ಜಿಲ್ಲೆಯಲ್ಲಿ ಮತದಾರರಿಗೆ ಚುನಾವಣೆ ಬಗ್ಗೆ ಜಾಗೃತಿ ಸಂದೇಶ ನೀಡಲು ಆಯೋಗದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ತಮ್ಮ ಮುಗ್ಧ ಶೈಲಿಯಿಂದ ಮನೆ ಮಾತಾಗಿರುವ ಹನುಮಂತಪ್ಪ ಮತದಾರರ ಮೇಲೂ ಅಷ್ಟೇ ಪರಿಣಾಮ ಬೀರಬಹುದು ಎಂಬುದು ಚುನಾವಣಾ ಆಯೋಗದ ಲೆಕ್ಕಾಚಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಇಫೆಕ್ಟ್ ನಿಂದ ಐ ಲವ್ ಯೂ ಹೇಳಲಾಗದೇ ಒದ್ದಾಡುತ್ತಿರುವ ಉಪೇಂದ್ರ!