Publish Date: Wed, 03 Apr 2019 (14:21 IST)
Updated Date: Wed, 03 Apr 2019 (14:23 IST)
ಚುನಾವಣೆ ಪ್ರಚಾರಕ್ಕೆ ಹೋದಲ್ಲೆಲ್ಲಾ ಜನರು ಉತ್ಸಾಹದಿಂದ ಸಪೋರ್ಟ್ ಮಾಡುತ್ತಾರೆ. ಹೀಗಂತ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸದ್ಯದ ಮಟ್ಟಿಗೆ ರೋಡ್ ಷೋ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕುಮಾರಣ್ಣ, ರೇವಣ್ಣ, ಸಿದ್ದರಾಮಣ್ಣ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಸಭೆ ನಡೆಯುತ್ತೆ. ನಾಳೆ ದೇವೇಗೌಡರು ಬಂದು ಶ್ರೀರಂಗಪಟ್ಟಣ, ಕೆಆರ್ ಪೇಟೆಯಲ್ಲಿ ಪ್ರಚಾರ ಮಾಡ್ತಾರೆ ಎಂದರು.
ಇನ್ನು ಅನಿತಾ ಕುಮಾರಸ್ವಾಮಿ ಪ್ರಚಾರಕ್ಕೆ ಬರುತ್ತಾರೆ. ತಾಯಿಯಾಗಿ ಮಗನಿಗಾಗಿ ಬರುತ್ತಿದ್ದಾರೆ. ಎಲ್ಲ ತಂದೆ, ತಾಯಂದಿರ ಆಶೀರ್ವಾದದಿಂದ ಮಕ್ಕಳಿಗೆ ಏಳಿಗೆಯಾಗುತ್ತೆ ಅಂತ ನಿಖಿಲ್ ಹೇಳಿದ್ದಾರೆ.