Select Your Language

Notifications

webdunia
webdunia
webdunia
webdunia

ಕೊನೆಗೂ ಕರಡಿ ಕುಣಿಸಿದ ಯಡಿಯೂರಪ್ಪ

ಕೊನೆಗೂ ಕರಡಿ ಕುಣಿಸಿದ ಯಡಿಯೂರಪ್ಪ
ಕೊಪ್ಪಳ , ಶನಿವಾರ, 30 ಮಾರ್ಚ್ 2019 (15:07 IST)
ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಹಾಲಿ ಸಂಸದರಿಗೆ ಬಿಜೆಪಿ ಬಿ ಫಾರಂ ನೀಡಿದೆ.

ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಬಿ ಫಾರಂ ವಿತರಿಸುವ ಮೂಲಕ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದರು.

ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಹಿತಿ ವರಿಷ್ಠರಿಗೆ ಇದ್ದ ಕಾರಣಕ್ಕೆ ಇಷ್ಟುದಿನ ಅಭ್ಯರ್ಥಿ ಯಾರು ಎಂದು ಘೊಷಣೆ ಮಾಡಿರಲಿಲ್ಲ ಎಂದು ಬಿಜೆಪಿ ಅಭ್ಯರ್ಥಿಯಾಗಿರುವ ಸಂಗಣ್ಣ ಕರಡಿ ಹೇಳಿದ್ದಾರೆ.

ಟಿಕೆಟ್ ಆಕಾಂಕ್ಷಿಗಳಾಗಿ ಹಲವರು ಇದ್ದರೂ ನಮ್ಮಲ್ಲಿ ತೀವ್ರ ತರವಾದ ಪೈಪೋಟಿ ಇರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಅಪ್ಪಣ್ಣ ಪದಕಿ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್, ಹಾಲೇಶ್ ಕಂದಾರಿ, ಈರಣ್ಣ ಗಾಣಿಗೇರ, ಅಮರೇಶ್ ಕರಡಿ, ಸುನೀಲ್ ದೇಸಾಯಿ ಇತರರಿದ್ದರು. 

 


Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸಭೆಯಲ್ಲಿ ರಾಹುಲ್ ಭಾಗಿ?